Saturday, April 19, 2025

ಜನಿವಾರ ಜಟಾಪಟಿ; ಸರ್ಕಾರಕ್ಕೆ ಸಲಹೆ ಕೊಟ್ಟ ಸಿದ್ದಲಿಂಗ ಸ್ವಾಮೀಜಿಗಳು

ತುಮಕೂರು : ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಸಿದ ವಿಚಾರ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿದ್ದು. ಬೀದರ್​ ಮತ್ತು ಶಿವಮೊಗ್ಗದಲ್ಲಿ ಜನಿವಾರ ತೆಗೆಸಿರುವುದು ವರದಿಯಾಗಿದೆ. ಈ ಕುರಿತು ತುಮಕೂರಿನ ಸಿದ್ದಗಂಗಾ ಮಠದ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಕ್ಕೆ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಹೇಳಿಕೆ ನೀಡಿದ್ದು. “ಸಿಇಟಿ ಪರೀಕ್ಷೆಯ ನಿಯಮವನ್ನ ಮೊದಲು ತಿಳಿದು ಕೊಳ್ಳಬೇಕು. ಅವರವರ ಆಚರಣೆಗೆ ಸಂವಿಧಾನ ಅವಕಾಶ ಕೊಟ್ಟಿದೆ. ಆಸ್ತಿಕರಾಗಿ ನಾಸ್ತಿಕರಾಗಿ ಬದುಕಲು ಸಂವಿಧಾನದಲ್ಲಿ ಅವಕಾಶ ಇದೆ. ಅಂತಹ ಧಾರ್ಮಿಕ‌ ಆಚರಣೆಗಳನ್ನ ಯಾರೇ ಮಾಡಿದರು ಅದನ್ನ ಒಪ್ಪಬೇಕಾಗಿದೆ.

ಇದನ್ನೂ ಓದಿ :ಮಹಿಳೆಗೆ ಗುಪ್ತಾಂಗ ತೋರಿಸಿ ವಿಕೃತಿ ಮೆರೆದಿದ್ದ ಕಾಮುಕ ಅರೆಸ್ಟ್​

ಸಿಇಟಿ ಪರೀಕ್ಷಾ ನಿಯಮದಲ್ಲಿ ಯಾವುದೇ ಗೊಂದಲ ಆಗದ ದೃಷ್ಟಿಯಿಂದ ಕ್ರಮಗಳನ್ನು ಕೈಗೊಂಡಿರುತ್ತಾರೆ. ಆದರೆ ಕೆಲವರು ಬುರ್ಖಾ ಹಾಕಿಕೊಂಡು ಬರ್ತೀನಿ ಅಂತಾರೆ. ಬುರ್ಕಾ ಹಾಕೊಂಡು ಬಂದರೆ ಯಾರೂ ಅನ್ನೋದು ಗೊತ್ತಾಗಲ್ಲ, ಅದು ಗೊಂದಲ ಉಂಟು ಮಾಡುತ್ತದೆ. ಇನ್ನೂ ಕೆಲವರು ಇನ್ನೊಂದು ಹಾಕಿಕೊಂಡು ಬರ್ತೀನಿ ಅಂತಾರೆ ಅವಾಗ ಗೊಂದಲ ಆಗುತ್ತೆ. ಈ ಗೊಂದಲ ನಿವಾರಣೆಗೆ ತಜ್ಞರ ಸಮಿತಿ ರಚನೆ ಮಾಡಿ.
ಸರ್ಕಾರ ಗೊಂದಲ ನಿವಾರಣೆ ಮಾಡಿ ಸೂಕ್ತ ಕ್ರಮ ಕೈಗೊಂಡರೆ ಸೂಕ್ತ ಎಂದು ಶ್ರೀಗಳು ಸರ್ಕಾರಕ್ಕೆ ಸಲಹೆ ನೀಡಿದರು.

RELATED ARTICLES

Related Articles

TRENDING ARTICLES