ಬೀದರ್ : ಇತ್ತೀಚೆಗೆ ನಕಲಿ ಅಧಿಕಾರಿಗಳ ಹಾವಳಿ ಹೆಚ್ಚಾಗುತ್ತಿದ್ದು. ಇಲ್ಲೊಂದು ಖರ್ತನಾಖ್ ಗ್ಯಾಂಗ್ ಸಿಬಿಐ ಅಧಿಕಾರಿಗಳ ಹೆಸರಲ್ಲಿ ವ್ಯಕ್ತಿಯೋರ್ವನಿಗೆ ಕರೆ ಮಾಡಿದ್ದು. ನಿಮ್ಮ ಮಗಳನ್ನು ಡ್ರಗ್ಸ್ ಹೆಸರಲ್ಲಿ ಬಂಧಿಸಲಾಗಿದೆ ಎಂದು ಬೆದರಿಕೆ ಹಾಕಿ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ.
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಘಟನೆ ನಡೆದಿದ್ದು. ನಗರದ ಕರೀಮ್ ಕಾಲೋನಿ ನಿವಾಸಿ ಮುನಿರ್ ತುರುಂಚಿ ಎಂಬ ವ್ಯಕ್ತಿಗೆ ನಕಲಿ ಸಿಬಿಐ ಅಧಿಕಾರಿಗಳು ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮುನಿರ್ ತುರಂಚಿಯ ಮಗಳು ಸಿಇಟಿ ಪರೀಕ್ಷೆ ಬರೆಯಲು ಎಂದು ಹೋಗಿದ್ದಳು. ಈ ವೇಳೆ ಆಘಂತುಕರು ಮುನಿರ್ಗೆ ಕರೆ ಮಾಡಿದ್ದು. ‘ನಾಲ್ಕು ಜನ ಯುವತಿಯರೊಂದಿಗೆ ನಿಮ್ಮ ಮಗಳನ್ನು ಡ್ರಗ್ಸ್ ಕೇಸಿನಲ್ಲಿ ಬಂಧಿಸಿದ್ದೇವೆ. ಆಕೆಯನ್ನು ಬಿಡಬೇಕೂ ಎಂದರೆ 2 ಲಕ್ಷ ಹಣ ನೀಡಿ ಎಂದು ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ :ರೈಲು ಹಳಿ ತಪ್ಪಿಸಲು ಯತ್ನ; ಮರದ ತುಂಡಿನ ಜೊತೆ ಜೈ ಶ್ರೀರಾಮ ಹೆಸರಿಗೆ ಕೇಸರಿ ಬಟ್ಟೆ ಪತ್ತೆ
ಇದನ್ನು ಕೇಳಿಸಿಕೊಂಡ ಮುನಿರ್ ಹೆದರಿದ್ದು. ನಕಲಿ ಅಧಿಕಾರಿಗಳಿಗೆ ತನ್ನ ಬಳಿ ಅಷ್ಟು ಹಣವಿಲ್ಲ ಎಂದು ಹೇಳಿದ್ದು, ತನ್ನ ಬಳಿಯಿದ್ದ 14ಸಾವಿರ ಹಣವನ್ನು ನಕಲಿ ಸಿಬಿಐ ಅಧಿಕಾರಿಗಳ ಖಾತೆಗೆ ಜಮೆ ಮಾಡಿದ್ದಾರೆ. ಹಣ ಹಾಕಿದ ನಂತರ ಮುನಿರ್ ಪೊಲೀಸ್ ಠಾಣೆಗೆ ಹೋಗಿದ್ದು. ಅಲ್ಲಿ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಅಲ್ಲಿಂದ ನೇರವಾಗಿ ಮುನಿರ್ ಸಿಇಟಿ ಎಕ್ಸಾಂ ನಡೆಯುತ್ತಿದ್ದ ಎಕ್ಸಾಂ ಸೆಂಟರ್ಗೆ ಧಾವಿಸಿದ್ದು. ಅಲ್ಲಿ ಮಗಳನ್ನು ನೋಡಿ ನಿಟ್ಟುಸಿರು ಬಿಟ್ಟಿದ್ದಾರೆ. ಈ ಘಟನೆ ಸಂಬಂಧ ಇನ್ನು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.