Monday, April 7, 2025

ವಕ್ಫ್​ ಮಸೂದೆ ಅಂಗೀಕಾರ ಬೆನ್ನಲ್ಲೆ ಅನ್ವರ್ ಮಾಣಿಪ್ಪಾಡಿಗೆ ಜೀವ ಬೆದರಿಕೆ..!

ಮಂಗಳೂರು : ಬಹುನಿರೀಕ್ಷಿತ ವಕ್ಫ್​ ತಿದ್ದುಪಡಿ ಮಸೂದೆಗೆ ಸಂಸತ್ತು ಅಂಗೀಕಾರ ನೀಡಿದೆ. ಇದರ ಬೆನ್ನಲ್ಲೆ ವಕ್ಫ್​ ಅಕ್ರಮದ ವರದಿ ನೀಡಿದ್ದ ಅನ್ವರ್​ ಮಾಣಿಪ್ಪಾಡಿಯವರಿಗೆ ಇಂಟರ್​ನೆಟ್​ ಕಾಲ್​ ಮೂಲಕ ಜೀವ ಬೆದರಿಕೆ ಕರೆಗಳು ಬರುತ್ತಿವೆ  ಎಂದು ತಿಳಿದು ಬಂದಿದೆ.

ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಯವರು ವಕ್ಪ್​ ತಿದ್ದುಪಡಿ ವಿಚಾರದಲ್ಲಿ ವರದಿ ನೀಡಿದ್ದರು. ಇದರ ಬೆನ್ನಲ್ಲೆ ಅವರಿಗೆ ಇಂಟರ್​ನೆಟ್​ ಕಾಲ್​ ಮೂಲಕ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ತಿಳಿದು ಬಂದಿದೆ. ಕಳೆದ ಎರಡು-ಮೂರು ದಿನಗಳಿಂದ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿದ್ದು. ಉರ್ದು, ಮರಾಠಿ, ಹಿಂದಿ, ತುಳು, ಇಂಗ್ಲೀಷ್​ ಭಾಷೆಯಲ್ಲಿ ಬೆದರಿಕೆ ಹಾಕಲಾಗುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ವಿನಯ್​ ಸಾವಿಗೆ ನ್ಯಾಯಕೊಡಿಸುವಂತೆ ಗೃಹ ಸಚಿವರಿಗೆ ಮನವಿ ಮಾಡುತ್ತೇನೆ; ವಿಜಯೇಂದ್ರ

ಕೆರೆ ಮಾಡಿರುವ ಆಘಂತುಕರು ಅನ್ವರ್​ ಮಾಣಿಪ್ಪಾಡಿಯವರಿಗೆ ‘ನಿನ್ನನ್ನು ಬಿಡುವುದಿಲ್ಲ, ನಿನ್ನನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದು. ಈ ವಿಚಾರವನ್ನು ಮಾಣಿಪ್ಪಾಡಿಯವರು ಮಂಗಳೂರು ಪೊಲೀಸ್​ ಕಮಿಷನರ್ ಅನುಪಮ್​ ಅಗರ್​ವಾಲ್​ ಮತ್ತು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರಿಗೆ ತಿಳಿಸಿದ್ದು. ಸೂಕ್ತ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES