Monday, February 24, 2025

ದೂರು ನೀಡಲು ಬಂದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಕಾನ್​ಸ್ಟೇಬಲ್​ !

ಬೆಂಗಳೂರು : ಅತ್ಯಾಚಾರಕ್ಕೆ ಒಳಗಾಗಿ ದೂರು ನೀಡಲು ಬಂದಿದ್ದ ಬಾಲಕಿಯ ಮೇಲೆ ಕಾನ್ಸ್​ಟೇಬಲ್​ವೋರ್ವ ಅತ್ಯಾಚಾರವೆಸೆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಇದೀಗ ಪೊಲೀಸರು ಆರೋಪಿ ಪೇದೆ ಅರುಣ್​ ಮತ್ತು ಸಂತ್ರಸ್ಥೆಯ ಸ್ನೇಹಿತ ವಿಕ್ಕಿ ಎಂಬಾತರನ್ನು ಬಂಧಿಸಿ ಕಂಬಿ ಹಿಂದೆ ಅಟ್ಟಿದ್ದಾರೆ.

17 ವರ್ಷದ ಸಂತ್ರಸ್ತೆ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದಳು. ಈ ವೇಳೆ ನೆರೆಮನೆಯಲ್ಲಿ ವಾಸವಿದ್ದ ವಿಕ್ಕಿ ಎಂಬಾತನ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿತ್ತು. ವಿಕ್ಕಿ ಸಂತ್ರಸ್ಥೆಗೆ ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ಅತ್ಯಾಚಾವೆಸಗಿ ಹಲ್ಲೆ ನಡೆಸಿದ್ದನು. ಈ ವಿಷಯವನ್ನು ಬಾಲಕಿ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು.

ಈ ಸಂಬಂಧ ಅಪ್ರಾಪ್ತ ಮತ್ತು ಆಕೆಯ ತಾಯಿ ಇಬ್ಬರು ದೂರು ನೀಡಲು ಎಂದು ಬೊಮ್ಮನಹಳ್ಳಿ ಪೊಲೀಸ್​ ಠಾಣೆಗೆ ಬಂದಿದ್ದರು. ಈ ವೇಳೆ ಠಾಣೆಯಲ್ಲಿದ್ದ ಕಾನ್ಸ್​ಟೇಬಲ್​ ಅರುಣ್​ ಎಂಬಾತ ಬಾಲಕಿಯನ್ನು ಪರಿಚಯಿಸಿಕೊಂಡಿದ್ದ. ಬಾಲಕಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ನೀಡುವುದಾಗಿ ನಂಬಿಸಿ ಮತ್ತು ಕೆಲಸ ಕೊಡಿಸುವುದಾಗಿ ನಂಬಿಸಿದ್ದನು.

ಇದನ್ನೂ ಓದಿ :ಸಾಲಭಾದೆಗೆ ಬೇಸತ್ತು ಹೆಂಡತಿ ಮಗಳೊಂದಿಗೆ ಕಾಲುವೆಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡ ಆಟೋ ಚಾಲಕ

ಕಳೆದ ಡಿಸೆಂಬರ್​ನಲ್ಲಿ ಸಂತ್ರಸ್ಥೆಯನ್ನು ಓಯೋ ರೂಂಗೆ ಕರೆದೊಯ್ದಿದ್ದ ಅರುಣ್​ ಮಧ್ಯದ ಬಾಟಲಿಯಲ್ಲಿ ಮತ್ತು ಬರುವ ಔಷದ ಬೆರೆಸಿ ಕುಡಿಸಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದನು. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಖಾಸಗಿ ವಿಡಿಯೋಗಳನ್ನು ವೈರಲ್​ ಮಾಡುವುದಾಗಿ ಬೆದರಿಕೆ ಹಾಕಿದ್ದನು ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಮೈಕೋ ಲೇಔಟ್​ ಪೊಲೀಸರು ಅರುಣ್​ ಮತ್ತು ವಿಕ್ಕಿ ಇಬ್ಬರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದು. ಇಬ್ಬರ ವಿರುದ್ದ  ಪೊಕ್ಸೊ ಹಾಗೂ ಬಿಎನ್ಎಸ್ ಕಾಯ್ದೆಯ ವಿವಿಧ ಸೆಕ್ಷನ್​ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣವನ್ನು ಕೃತ್ಯ ನಡೆದ ಸ್ಥಳ ಆಧರಿಸಿ ಬೊಮ್ಮನಹಳ್ಳಿ ಪೊಲೀಸರಿಗೆ ಪ್ರಕರಣವನ್ನ ವರ್ಗಾವಣೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES