ಹೊಸಕೋಟೆ: ಕೇವಲ 500 ರೂಪಾಯಿಗೆ ಚಾಕುವಿನಿಂದನ ಇರಿದು ಕೊಲೆ ಮಾಡಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದ್ದು. ಮೃತ ದುರ್ದೈವಿಯನ್ನು 23 ವರ್ಷದ ಮೋಹಿನ್ ಎಂದು ಗುರುತಿಸಲಾಗಿದೆ.
ಹೌದು.. ಕೇವಲ 500 ರೂಪಾಯಿಗೆ ಕೊಲೆ ನಡೆದಿದೆ ಎಂದರೆ ನೀವು ನಂಬಲೆಬೇಕು. ನಾವು ಪ್ರತಿದಿನ ಕೊಲೆ, ದರೋಡೆ ಎಂಬೆಲ್ಲಾ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಆದರೆ ಈ ಎಲ್ಲಾ ಘಟನೆಗಳ ಹಿಂದೆ ಯಾವುದಾದರೂ ಒಂದು ಬಲವಾದ ಕಾರಣವಿರುತ್ತದೆ. ಕೋಪದ ಕೈಗೆ ಬುದ್ದಿಕೊಟ್ಟು ಇವರು ಕಂಬಿ ಹಿಂದೆ ಬೀಳುತ್ತಾರೆ. ಆದರೆ ಹೊಸಕೋಟೆ ತಾಲೂಕಿನ ಕಟ್ಟಿಗೆನಹಳ್ಳಿ ಗ್ರಾಮದಲ್ಲಿ ಗಾಂಜಾ ತರಲು 500 ರೂಪಾಯಿ ಕೊಟ್ಟಿದ್ದ ಯುವಕ, ಗಾಂಜ ತರದೆ ಮೊಬೈಲ್ ಸ್ವಿಚ್ ಆಫ್ ಮಾಡಿದ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ :ಕುಂಭಮೇಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತಳ: 7 ಮಂದಿ ಕನ್ನಡಿಗರ ದುರ್ಮರಣ
ಕೊಲೆಯಾಗಿರುವ ಮೋಹಿನ್ಗೆ ರೋಷನ್ ಗಾಂಜ ತರಲು ಎಂದು 500 ರೂಪಾಯಿ ಕೊಟ್ಟಿದ್ದನು. ಮೋಹಿನ್ ಗಾಂಜ ತರುವುದಾಗಿ ಹೇಳಿ ಹಣ ಪಡೆದು ಮನೆಗೆ ಹೋಗಿದ್ದನು. ಆದರೆ ಮನೆಗೋದ ಮೋಹಿನ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದನು. ಇದರಿಂದ ಕುಪಿತಗೊಂಡ ರೋಷನ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ತಿರುಮಲ ಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.