ಬೆಂಗಳೂರು : ನಟ ದರ್ಶನ್ ಸುರ್ಧಿಘ ಸಮಯದ ನಂತರ ಜನರಿಗೆ ವಿಡಿಯೋ ಸಂದೇಶವನ್ನು ನೀಡಿದ್ದು. ಈ ಬಾರಿಯ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಿಮ್ಮನ್ನು ಮೀಟ್ ಮಾಡಿ ನಿಮಗೆ ಥ್ಯಾಂಕ್ಸ್ ಹೇಳಬೇಕೆಂಬ ಆಸೆಯಿತ್ತು. ಆದರೆ ಆರೋಗ್ಯ ಸಮಸ್ಯೆಯಿಂದ ಈ ಭಾರಿ ಅದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಬೆನ್ನು ನೋವಿನ ಸಮಸ್ಯೆಯಿಂದಾಗಿ ನಟ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಈ ಬಾರಿ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ವಿಡಿಯೋ ಮಾಡಿ ವಿವರಿಸಿರುವ ನಟ ದರ್ಶನ್ ‘ಬೆನ್ನು ನೋವಿಗೆ ಇಂಜೆಕ್ಷನ್ ಪಡೆದಾಗ 15-20 ದಿನ ಚನ್ನಾಗಿರುತ್ತೇನೆ, ಆದರೆ ನಂತರ ಮತ್ತೆ ನೋವು ಆರಂಭವಾಗುತ್ತೆ ಮತ್ತೆ ಅದಕ್ಕೆ ಚಿಕಿತ್ಸೆ ಪಡೆಯಬೇಕಾಗುತ್ತದೆ. ಇದಕ್ಕೆ ಆಪರೇಷನ್ ಎನ್ನುವುದು ಕಟ್ಟಿಟ್ಟಬುತ್ತಿ. ಅದನ್ನು ಮಾಡಿಸಲೆಬೇಕು. ಆದರೆ ನಾನೇ ಅದನ್ನು ಸ್ವಲ್ಪ ಸಮಯದವರೆಗೂ ದೂರ ತಳ್ಳುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ:‘ಪ್ರೀತ್ಸೊದ್ ತಪ್ಪಾ’ ಎಂದ ಮಗಳನ್ನೆ ಕೊಂದ ಅಪ್ಪಾ !
ಮುಂದುವರಿದು ಮಾತನಾಡಿದ ದರ್ಶನ್ ‘ ಅನೇಕ ನಿರ್ಮಾಪಕರು ತುಂಭಾ ದಿನಗಳಿಂದ ಕಾಯುತ್ತಿದ್ದಾರೆ. ಅವರಿಗೆ ಅನ್ಯಾಯ ಮಾಡುವುದು ಬೇಡ ಎಂದ ದರ್ಶನ್ ಶೀಘ್ರದಲ್ಲೆ ಸಿನಿಮಾ ಸೆಟ್ನಲ್ಲಿ ಕಾಣಿಸಿಕೊಳ್ಳುವ ಹಿಂಟ್ ನೀಡಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಹೊರ ಬರುತ್ತಿದ್ದಂತೆ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುವುದಾಗಿ ದರ್ಶನ್ ಹೇಳಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿರುವ ದರ್ಶನ್ ಇದೊಂದು ಬಾರಿ ನನ್ನನ್ನು ಕ್ಷಮಿಸಿ, ಆದಷ್ಟು ಬೇಗ ನಿಮ್ಮನ್ನು ನಾನು ಬೇಟಿಯಾಗುತ್ತೇನೆ ಎಂದು ಹೇಳಿದರು.