Saturday, August 23, 2025
Google search engine
HomeUncategorizedವಿಜಯೇಂದ್ರನ ವಿರುದ್ದ ತನಿಖೆ ಮಾಡಲು ಸಿದ್ದರಾಮಯ್ಯಗೆ ಏನ್​ ದಾಡಿ: ಯತ್ನಾಳ್​

ವಿಜಯೇಂದ್ರನ ವಿರುದ್ದ ತನಿಖೆ ಮಾಡಲು ಸಿದ್ದರಾಮಯ್ಯಗೆ ಏನ್​ ದಾಡಿ: ಯತ್ನಾಳ್​

ದೆಹಲಿ : ಹೈಕಮಾಂಡ್​ ಭೇಟಿಗೆ ಎಂದು ಬಿಜೆಪಿ ಯತ್ನಾಳ್​ ಬಣ ದೆಹಲಿಗೆ ಭೇಟಿ ನೀಡಿದ್ದು. ಇಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್​ ವಿಜಯೇಂದ್ರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಯತ್ನಾಳ್​ ‘ಇಂದು ಲಿಂಗಾಯತ ನಾಯಕರು ಹೈಕಮಾಂಡ್ ಭೇಟಿ ಮಾಡುತ್ತೇವೆ, ಕೆಲ ನಾಯಕರು ನಿನ್ನೆ ಭೇಟಿಯಾಗಿದ್ದಾರೆ, ಇಂದು ನಾವು ಭೇಟಿಯಾಗುತ್ತಿದ್ದೇವೆ. ರಾಜ್ಯದಲ್ಲಿ ಎಲ್ಲ ಲಿಂಗಾಯತರು ಬಿಎಸ್‌ವೈ ಪರವಾಗಿಲ್ಲ, ಯಡಿಯೂರಪ್ಪ ಅವರು ಆ ಗೌರವ ಉಳಿಸಿಕೊಂಡಿಲ್ಲ,  ವಿಜಯೇಂದ್ರ ಅವರ ಅಧ್ಯಕ್ಷ ಮಾಡುವುದಕ್ಕೆ ನಮ್ಮ ವಿರೋಧ ಇದೆ, ಇಬ್ಬರು ಮೂವರು ಪೇಮೆಂಟ್ ಸ್ವಾಮಿಗಳು ಅವರ ಜೊತೆಗಿದ್ದಾರೆ ಅಷ್ಟೇ.

ಇದನ್ನೂ ಓದಿ :ಟ್ರಾಕ್ಟರ್ ಮಗುಚಿ ಬಿದ್ದು ಚಾಲಕ ಸ್ಥಳದಲ್ಲೇ ಸಾ*ವು

ವಿಜಯೇಂದ್ರನ ವಿರುದ್ದ ತನಿಖೆ ಮಾಡಲು ಸಿದ್ದರಾಮಯ್ಯಗೆ ಏನು ದಾಡಿ !

ವಿಜಯೇಂದ್ರ ಬಿಎಸ್‌ವೈ ಅವರು ನಕಲಿ ಸಹಿ ಮಾಡಿದ್ದಾರೆ, ಸಿದ್ದರಾಮಯ್ಯ ಅವರಿಗೆ ತನಿಖೆ ಮಾಡಲು ಏನು ದಾಡಿ. ಎಲ್ಲ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ, ವಿಜಯೇಂದ್ರ ಕರ್ಮಕಾಂಡ ಬಹಳ ಇದೆ, ಹಲ್ಕಾ ಕೆಲಸ ಬಹಳ ಇದೆ, ಬಹಳಷ್ಟು ಲಿಂಗಾಯತ ನಾಯಕರನ್ನು ಮುಗಿಸಿದ್ದಾರೆ. ಬಸವರಾಜ್ ಪಾಟೀಲ್ ಸೇಡಂ, ಬಿ.ವಿ ಶಿವಪ್ಪ, ಸಿದ್ದೇಶ್ವರ್, ಮಲ್ಲಿಕಾರ್ಜುನಯ್ಯ ಅವರನ್ನು ಮುಗಿಸಿದರು, ನನ್ನ ಸತತವಾಗಿ ಮುಗಿಸುವ ಪ್ರಯತ್ನ ಮಾಡದರು, ರಮೇಶ್ ಜಾರಕಿಹೋಳಿ ರಸ್ತೆಗೆ ಬರಲು ಬಿಡಲ್ಲ ಎಂದು ಹೇಳಿದ್ದಾರೆ. ಏನು ಗೂಂಡಾಗಿರಿ ಮಾಡ್ತಿದ್ದಾರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments