Saturday, February 1, 2025

ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಮೈಕ್ರೋಫೈನಾನ್ಸ್​ ಕಿರುಕುಳಕ್ಕೆ ಪರಿಹಾರ ನೀಡಿಲ್ಲ: ಎಚ್​.ಕೆ ಪಾಟೀಲ್​

ಬೆಂಗಳೂರು : ಕೇಂದ್ರ ಬಜೆಟ್​ ಕುರಿತು ಕಾನೂನು ಸಂಸದೀಯ ಸಚಿವ ಎಚ್​ಕೆ ಪಾಟೀಲ್​ ಲೇವಡಿ ಮಾಡಿದ್ದು. ಇದು ಬಜೆಟ್​ ಅಲ್ಲ, ಬಿಹಾರ ಚುನಾವಣೆಯ ಪ್ರಣಾಳಿಕೆ ಎಂದು ಹೇಳಿದರು.

ಕೇಂದ್ರದ ಬಜೆಟ್​ ಕುರಿತು ಲೇವಡಿ ಮಾಡಿದ ಸಚಿವ ಎಚ್​.ಕೆ ಪಾಟೀಲ್​ ‘ ಈ ಬಾರಿಯ ಕೇಂದ್ರ ಬಜೆಟ್​ನಲ್ಲಿ ಸರ್ಕಾರ ಮೈಕ್ರೋ ಫೈನಾನ್ಸ್​​ ಕಿರುಕುಳಕ್ಕೆ ಪರಿಹಾರ ನೀಡಿಲ್ಲ. ಇದು ಒಂದು ಬಜೆಟ್ಟಾ.. ಇದು ಬಿಹಾರ ಚುನಾವಣೆಯ ಮ್ಯಾನಿಫ್ಯಾಸ್ಟೋ. ಈ ಬಾರಿಯ ಬಜೆಟ್​ನಲ್ಲಿ ಏನೇನೋ ನಿರೀಕ್ಷೆ ಇತ್ತು. ಆದರೆ ಏನೂ ನೀಡಿಲ್ಲ. ಬಜೆಟ್​ ಸಂಪೂರ್ಣ ನಿರಾಶಾದಾಯಕ ಬಜೆಟ್​ ಎಂದು ಹೇಳಿದರು.

ಇದನ್ನೂ ಓದಿ :ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಮೈಕ್ರೋಫೈನಾನ್ಸ್​ ಕಿರುಕುಳಕ್ಕೆ ಪರಿಹಾರ ನೀಡಿಲ್ಲ: ಎಚ್​.ಕೆ ಪಾಟೀಲ್​

ಕೇಂದ್ರ ಸರ್ಕಾರ ತನ್ನ ಬಜೆಟ್​ನಲ್ಲಿ ಕೃಷಿಕರಿಗೆ ಇರುವ ತೊಂದರೆ ಬಗ್ಗೆ ಗಮನ ಹರಿಸಿಲ್ಲ,  ಮೈಕ್ರೋ ಫೈನಾನ್ಸ್ ನಿಂದ ಜನರು ಆತ್ಮಹತ್ಯೆ ಮಾಡ್ಕೋಂತಿದ್ದಾರೆ. ಅದಕ್ಕೆ ಪರಿಹಾರ ಕೊಡಬೇಕು ಎಂಬ ಆಲೋಚನೆಯೂ ಬರಲಿಲ್ಲ. ಇವುಗಳಿಂದ ಆಂದ್ರ, ತೆಲಂಗಾಣ, ಕರ್ನಾಟಕದಲ್ಲಿ ಸಮಸ್ಯೆ ಆಗಿದೆ. ಆರ್​ಬಿಐ ನೋಂದಾಯಿತ ಫೈನಾನ್ಸ್​ಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಇದರ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಚಕಾರ ಎತ್ತಿಲ್ಲ ಎಂದು ಹೇಳಿದರು.

RELATED ARTICLES

Related Articles

TRENDING ARTICLES