Sunday, October 27, 2024

KSRTC ಬಸ್​ ನಿರ್ವಾಹಕನಿಂದ ಶಕ್ತಿ ಯೋಜನೆ ದುರ್ಬಳಕೆ

ಚಾಮರಾಜನಗರ : ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ರಾಜ್ಯದ  ಮಹಿಳೆಯರು ಸರ್ಕಾರಿ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣ  ನಡೆಸಲು ಸಾಧ್ಯವಾಗಿದ್ದು. ಇದೇ  ಯೋಜನೆಯ ಲಾಭ ಪಡೆದ ನಿರ್ವಾಹಕನೊಬ್ಬ ಅನ್ಯರಾಜ್ಯದವರಿಂದ ಹಣ ಪಡೆದು ಅವರಿಗು ಉಚಿತ ಟಿಕೆಟ್​ ನೀಡಿದ್ದಾನೆ ಎಂದು ಜಿಲ್ಲೆಯ ವಿಧ್ಯಾರ್ಥಿಗಳು ಆರೋಪಿಸಿ ದೂರು ನೀಡಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಸಿದ್ದರಾಮಯ್ಯನವರ ಶಕ್ತಿ ಯೋಜನೆ ದುರ್ಬಳಕೆಯಾಗುತ್ತಿದ್ದು. ಚಾಮರಾಜನಗರದಲ್ಲೊಬ್ಬ ನಿರ್ವಾಹಕ ಹಣ ಪಡೆದು ಶಕ್ತಿಯೋಜನೆಯ ಹಣ ಪಡೆದಿದ್ದಾನೆ. ಅನ್ಯರಾಜ್ಯದವರಿಂದ, ವೃದ್ದರಿಂದ ಈ ರೀತಿ ಸುಲಿಗೆ ಮಾಡಿದ್ದು. ಜಿಲ್ಲೆಯ ಇಂಜಿನಯರಿಂಗ್ ವಿಧ್ಯಾರ್ಥಿಗಳಿಂದಲು ಹಣ ಪಡೆದು ಶಕ್ತಿ ಯೋಜನೆಯ ಟಿಕೆಟ್​ ನೀಡಿದ್ದಾನೆ ಎಂದು ಆರೋಪಿಸಿ ವಿಧ್ಯಾರ್ಥಿಗಳು ಬಸ್​ ಡಿಪೋ ಮ್ಯಾನೇಜರ್​ಗೆ ದೂರ ನೀಡಿದ್ದಾರೆ, ವಿಧ್ಯಾರ್ಥಿಗಳ ಆಕ್ರೋಶಕ್ಕೆ ಸ್ಪಂಧಿಸಿದ ಡಿಪೋ ಮ್ಯಾನೇಜರ್​ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES