Sunday, September 8, 2024

ರೇಣುಕಸ್ವಾಮಿ ಕುಟುಂಬಸ್ಥರನ್ನು ಭೇಟಿಯಾಗಿ 1 ಲಕ್ಷ ರೂ. ಚೆಕ್​ ನೀಡಿದ ನಟ ವಿನೋದ್​ ರಾಜ್​

ಚಿತ್ರದುರ್ಗ: ದರ್ಶನ್​ ಅ್ಯಂಡ್​ ಗ್ಯಾಂಗ್​​ನಿಂದ ಕೊಲೆಗೀಡಾದ ಚಿತ್ರದುರ್ಗದ ರೇಣುಕಾಸ್ವಾಮಿ ನಿವಾಸಕ್ಕೆ ಇಂದು ನಟ ವಿನೋದ್​ ರಾಜ್​ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಕುಟುಂಬಸ್ಥರಿಗೆ ಒಂದು ಲಕ್ಷ ರೂ. ಚೆಕ್​ ನೀಡಿದರು.

ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ನಡೆಯಬಾರದ ಒಂದು ಘಟನೆ ನಡೆದುಹೋಗಿದೆ. ಪ್ರಾಣ ಕಳೆದುಕೊಂಡು ಇಡೀ ಕುಟುಂಬ ನರಳುತಾ ಇದೆ. ಯಾವ ಒಂದು ದಿಕ್ಕಿಗೆ ನಮ್ಮ ಮನುಷತ್ವ ಸಾಗುತ್ತಿದೆ. ಜೀವನವಿಡಿ ಜೀವಗಳ ಬಗ್ಗೆ ಕಾಳಜಿವಹಿಸುವುದೇ ಜೀವನ ಎಂದರು.

ಇದನ್ನೂ ಓದಿ: ದರ್ಶನ್​​​​ಗಾಗಿ ಕೊಲ್ಲೂರು ಮೂಕಾಂಬಿಕ ದೇವಾಲಯದಲ್ಲಿ ಪತ್ನಿಯಿಂದ ಹೋಮ 

ಕೆಟ್ಟ ಘಳಿಗೆಯಲ್ಲಿ ಅಚಾತುರ್ಯವಾಗಿದೆ. ನಾವೇನೇ ಕೊಟ್ಟರು ಈ ಕುಟುಂಬಕ್ಕೆ ವಾಪಾಸ್​ ಮಗನನ್ನು ತಂದುಕೊಡಲಾಗುವುದಿಲ್ಲ. ಮನೆಯಲ್ಲಿ 90 ವರ್ಷಕ್ಕೆ ಮೇಲ್ಪಟ್ಟ ಅಜ್ಜಿ ಇದಾರೆ. ಅವರನ್ನು ನೋಡಿಕೊಳ್ಳೋಕೆ ಅವರ ಮಕ್ಕಳಿದ್ದಾರೆ. ರೇಣುಕಾಸ್ವಾಮಿ ತಂದೆ ತಾಯಿಗಳನ್ನು ನೋಡಿಕೊಳ್ಳಲು ಯಾರಿದ್ದಾರೆ? ಇದನ್ನೆಲ್ಲಾ ನೋಡಿ ನನ್ನನ್ನ ನಾನು ಸುಧಾರಿಸಿಕೊಳ್ಳೋದು ಹೇಗೆ ಎಂದು ಯೋಚನೆ ಮಾಡ್ತಾ ಇದೇನೆ.

ಇದೇ ವೇಳೆ ನಟ ದರ್ಶನ್ ಪರವಾಗಿ ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿಯಾಗಲು ಬಂದಿದ್ದೀರಿ ಎಂಬ ಮಾತುಗಳು ಇದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಲ್ಲ ಆರೀತಿ ಎಲ್ಲಾ ಇಲ್ಲ ಎಂದರು.

RELATED ARTICLES

Related Articles

TRENDING ARTICLES