Sunday, September 8, 2024

ದರ್ಶನ್​ಗೆ ಮನೆ ಊಟ ಕೊಡಲು ಕೋರ್ಟ್​ ನಿರಾಕರಣೆ: ದಾಸನಿಗಾಗಿ ಚಕ್ಕುಲಿ ತಂದಿದ್ದ ಮಹಿಳೆಗೆ ನಿರಾಸೆ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಪಾಲಾಗಿರುವ ದರ್ಶನ್​​ಗೆ ನೀಡಲು ಅಭಿಮಾನಿ ಮಹಿಳೆಯೋರ್ವರು ಪರಪ್ಪನ ಅಗ್ರಹಾರದ ಜೈಲಿಗೆ ಚಕ್ಕುಲಿ ತಂದಿದ್ದಾರೆ.

ಮೈಸೂರಿನ ಸರಸ್ವತಿಪುರಂ ಮೂಲದ ಮಹಿಳೆ ಮಂಜುಳಾ ದರ್ಶನ್​ ಭೇಟಿಗೆ ಆಗಮಿಸಿದ್ದು, ದರ್ಶನ್​ಗಾಗಿ ಬಾತ್, ಚಕ್ಕುಲಿ ಮಾಡಿಕೊಂಡು ಬಂದಿದ್ದಾರೆ. ಜೈಲು ಒಳಗೆ ಬಿಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇನ್ನು ಈ ಕುರಿತು ಮಾತನಾಡಿದ ಅವರು, ದರ್ಶನ್ ತಪ್ಪು ಮಾಡಿದ್ದರೆ ತಪ್ಪೇ, ನಮಗೂ 2 ದಿನ ಬೇಜಾರಾಗಿತ್ತು. ಆದರೇ ಹಾಗೆ ಬಿಟ್ಟು‌ ಬಿಡೋಕಾಗುತ್ತಾ, ದಯವಿಟ್ಟು ಒಳಗೆ ಬಿಡಿ. ಮಾಧ್ಯಮದವರು ಸಹಾಯ ಮಾಡಿ ನಮನ್ನು ಒಳಗೆ ಕಳಿಸಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೋಹ್ಲಿಯಂತ ದಿಗ್ಗಜ ಆಟಗಾರ ಮನೀಶ್ ಪಾಂಡೆಗೆ ಇದೇ ಕೊನೆಯ ಪ್ರಯಾಣವಾದರೂ ಅಚ್ಚರಿಯಲ್ಲ!

ತನಗೆ ಮನೆ ಊಟ ನೀಡುವಂತೆ ಕೋರ್ಟ್​ಗೆ ಮನವಿ ಮಾಡಿಕೊಂಡಿದ್ದ ನಟ ದರ್ಶನ್​ಗೆ ನಿರಾಸೆಯಾಗಿದೆ. ದರ್ಶನ್​ ಕನಸು ಭಗ್ನವಾಗಿದೆ. ಅನಾರೋಗ್ಯ ಕಾರಣ ಮನೆ ಉಟಕ್ಕೆ ದರ್ಶನ್​ ಮನವಿ ಸಲ್ಲಿಸಿದ್ದರು, ಸದ್ಯ ಈ ಬೇಡಿಕೆಯನ್ನು ನ್ಯಾಯಾಲಯ ನಿರಾಕರಿಸಿದೆ. ವರದಿಯಲ್ಲಿ ಮನೆಊಟಕ್ಕೆ ಅವಕಾಶವಿಲ್ಲ, ಸೆಕ್ಷನ್​ 728 ಪ್ರಕಾರ ಕೊಲೆ ಆರೋಪಿಗೆ ಮನೆ ಊಟ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಅರ್ಜಿಯ ವಿಚಾರಣೆಯು ಮತ್ತೆ ಇದೇ ಜುಲೈ 29ರಂದು ನಡೆಯಲಿದೆ.

RELATED ARTICLES

Related Articles

TRENDING ARTICLES