Sunday, September 8, 2024

ದರ್ಶನ್​ ಭೇಟಿ ಬಳಿಕ ಹಾಸ್ಯನಟ ಸಾಧುಕೋಕಿಲ ಪ್ರತಿಕ್ರಿಯೆ

ಬೆಂಗಳೂರು: ಮೊನ್ನೆ ದರ್ಶನ್​ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ, ನಮ್ಮ ಸ್ನೇಹಿತರು ಮತ್ತು ಹತ್ತಿರದವರು ಭೇಟಿಗೆ ಬರಬೇಕಾಗಿತ್ತು ಆದ್ದರಿಂದ ನಾನು ವಾಪಾಸ್​ ಹೋಗಿದ್ದೆ. ಆದರೇ ಇಂದು ದರ್ಶನ್​ರನ್ನ ಭೇಟಿ ಮಾಡಿದ್ದೇನೆ ಎಂದು ಹಾಸ್ಯನಟ ಸಾಧುಕೋಕಿಲ ಅವರು ಹೇಳಿದರು.

ಪರಪ್ಪನ ಅಗ್ರಹಾರದ ಬಳಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಜೈಲಿನಲ್ಲಿ ನಟ ದರ್ಶನ್​ ಕೂಲ್​ ಆಗಿ ಕಾಮ್​ ಆಗಿ ಬುಕ್ಸ್​ ಓದಿಕೊಂಡಿದ್ದಾರೆ. ಅವರನ್ನು ನೋಡಿ ನಮಗೂ ಸ್ವಲ್ಪ ನೆಮ್ಮದಿ ಸಿಕ್ತು. ದರ್ಶನ್​ ಅವರ ಮೊದಲನೇ ಸಿನಿಮಾ ಮೆಜೆಸ್ಟಿಕ್​ ನಿಂದ ಇಲ್ಲಿಯವರೆಗೆ ಹಲವು ಸಿನಿಮಾಗಳು ಜೊತೆಯಲ್ಲಿ ಮಾಡಿಕೊಂಡು ಬಂದಿದ್ದೇನೆ. ದರ್ಶನ್​ ಆತ್ಮೀಯತೆ ಏನು ಅಂತ ನನಗೆ ಚನ್ನಾಗಿ ಗೊತ್ತಿದೆ. ಒಬ್ಬ ಬ್ರದರ್ ಆಗಿ ಇಂದು ಅವರ ಭೇಟಿ ಮಾಡಿದ್ದೇನೆ ಎಂದರು.

ಇದನ್ನೂ ಓದಿ: ದರ್ಶನ್​ಗೆ ಮನೆ ಊಟ ಕೊಡಲು ಕೋರ್ಟ್​ ನಿರಾಕರಣೆ: ದಾಸನಿಗಾಗಿ ಚಕ್ಕುಲಿ ತಂದಿದ್ದ ಮಹಿಳೆಗೆ ನಿರಾಸೆ

ನಟ ದರ್ಶನ್ ಆವರ ಆರೋಗ್ಯದ ಬಗ್ಗೆ ಪ್ರತಿಕ್ರಿಯೆ ನಿಡಿದ ಅವರು, ಸದ್ಯ ಆರೋಗ್ಯವಾಗಿದ್ದಾರೆ. ಅನಾರೋಗ್ಯಕ್ಕೀಡಾದರೇ ಒಳಗೆ ಡಾಕ್ಟರ್​ ಸೇರಿ ಎಲ್ಲಾ ಸವಲತ್ತುಗಳು ಇದೆ. ಜೈಲಿನವರಿಗೂ ಅವರದ್ಧೇ ಆದ ರೂಲ್ಸ್​ ಇರುತ್ತದೆ. ಅದರ ಪ್ರಕಾರ ಏನ್​ ಮಾಡಬೇಕೋ ಅದನ್ನು ಮಾಡ್ತಾರೆ ಎಂದರು.

ಅಭಿಮಾನಿಗಳು ಸಮಾಧಾನವಾಗಿ ಇರಬೇಕು, ಅಭಿಮಾನಿಗಳು ಸಮಾಧಾನವಾಗಿದ್ದರೇ ಮಾತ್ರ ದರ್ಶನ್​ ಅವರು ಸಮಾಧಾನವಾಗಿ ಇರ್ತಾರೆ ಎಂದರು. ಇಲ್ಲವಾದರೇ ಟೆಂಕ್ಷನ್ ಆಗ್ತಾರೆ ಎಂದರು.

RELATED ARTICLES

Related Articles

TRENDING ARTICLES