Saturday, September 7, 2024

ಸರಿಯಾಗಿ ತೀರ್ಪು ಕೊಟ್ಟಿಲ್ಲ ಎಂದು ಗರಂ ಆದ ಯುವಕರು: ಮಾರಕಾಸ್ತ್ರ ಹಿಡಿದು ದಾಂಧಲೆ

ಬೆಂಗಳೂರು: ಕೋಕೋ ಟೂರ್ನಮೆಂಟ್​ ವೇಳೆ ಯುವಕರು ಡ್ಯಾಗರ್​ ಸೇರಿದಂತೆ ಮಾರಣಾಂತಿಕ ಆಯುಧಗಳನ್ನು ಹಿಡಿದು ಜನರನ್ನು ಭಯಭೀತರನ್ನಾಗಿಸಿರುವ ಘಟನೆ ಕೊತ್ತನೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಶೂಟೌಟ್​

ಕೊತ್ತನೂರು ಬಳಿ ಇರುವ ಸರ್ಕಾರಿ ಶಾಲೆಯಲ್ಲಿ ಕೋಕೋ ಟೂರ್ನಮೆಂಟ್​ ಆಯೋಜನೆ ಮಾಡಲಾಗಿತ್ತು. ಈ ವೇಳೆ ತೀರ್ಪುಗಾರರು ನೀಡಿದ ತೀರ್ಪು ತಪ್ಪು ಎಂದು ರೊಚ್ಚಿಗೆದ್ದ ಯುವಕರು ಮಾರಕಾಸ್ತ್ರಗಳನ್ನು ಹಿಡಿದು ಮೈದಾನದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದ ವೀಡಿಯೋವೊಂದು ಸದ್ಯ ವೈರಲ್​ ಆಗಿದೆ. ಈ ವೀಡಿಯೋದಲ್ಲಿ ಯುವಕರು ವಿಕೇಟ್, ಚಾಕು, ಡ್ರ್ಯಾಗರ್​ಗಳನ್ನು ಹಿಡಿದು ಭಯದ ವಾತಾವರಣ ಸೃಷ್ಟಿಸಿದ್ದಾರೆ. ಕೊತ್ತನೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದೂ ಮಾಕರಾಸ್ತ್ರಗಳನ್ನು ಹಿಡಿದು ಓಡಾಡಿದ್ದವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES