Saturday, September 7, 2024

ಜೈಲಿನಲ್ಲಿ ‘ಡೆವಿಲ್’ ದರ್ಶನ್​.. ನಿರ್ಮಾಪಕರಿಗೆ ಟೆನ್ಷನ್!

ಬೆಂಗಳೂರು : ರೇಣುಕಾಸ್ವಾಮಿ ಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ ಪರಪ್ಪನ ಅಗ್ರಹಾರದಲ್ಲಿದ್ದಾರೆ. ದರ್ಶನ್‌ಗೆ ಜಾಮೀನು ಸಿಗೋದು ಯಾವಾಗ ಅನ್ನೋದು ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಈ ನಡುವೆ ನಟ ದರ್ಶನ್ ನಂಬಿ ಸಿನಿಮಾ ಮಾಡಲು ಹೊರಟಿದ್ದ ನಿರ್ಮಾಪಕರಿಗೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ದರ್ಶನ್ ಅಭಿಮಾನಿಗಳಿಗೆ ಡಿಕೆಶಿ ಆಶ್ವಾಸನೆ: ಡಿಸಿಎಂ ಭೇಟಿಯಾದ ವಿಜಯಲಕ್ಷ್ಮಿ, ದಿನಕರ್​ ಮತ್ತು ಪ್ರೇಮ್​

ಈಗಾಗ್ಲೇ ದರ್ಶನ್​ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಡೆವಿಲ್’ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದ್ದು, 30 ದಿನಗಳ ಕಾಲ ಬ್ಯಾಂಕಾಕ್‌ನಲ್ಲಿ ಶೂಟ್ ಮಾಡಲು ನಿರ್ಮಾಪಕ ಮಿಲನ ಪ್ರಕಾಶ್ ಪ್ಲ್ಯಾನ್ ಮಾಡಿದ್ದರು. ಆದರೇ, ದರ್ಶನ್‌ ಇಲ್ಲದೇ ಈಗಾಗ್ಲೇ ಸಿನಿಮಾ ಶೂಟಿಂಗ್ ಮುಂದೂಡಲಾಗಿದೆ. ಒಂದು ವೇಳೆ ದರ್ಶನ್‌ಗೆ ಜಾಮೀನು ಸಿಕ್ಕರು ದೇಶದಿಂದ ಹೊರ ಹೋಗದಂತೆ ಷರತ್ತು ಹಾಕಲಾಗುತ್ತದೆ. ಹೀಗಾಗಿ, ದರ್ಶನ್ ಹೊರಬಂದ್ರೂ ಕೂಡ ಅವರ ಪಾಸ್‌ಪೋರ್ಟ್‌ನ ಕೋರ್ಟ್ ವಶಕ್ಕೆ ಪಡೆಯಲಿದ್ದು, ವಿದೇಶಕ್ಕೆ ಹೋಗುವುದು ಸಾಧ್ಯವಿಲ್ಲ.

ಈ ಹಿನ್ನೆಲೆ ಸಂಕಷ್ಟದಲ್ಲಿ ಕೋಟಿ ಕೋಟಿ ಹಣ ಹೂಡಿರೋ ನಿರ್ಮಾಪಕ ಮಿಲನಾ ಪ್ರಕಾಶ್, ಇದೀಗ ಸಂಕಷ್ಟದಲ್ಲಿದ್ದಾರೆ. ಸದ್ಯ, ಡಿಸೆಂಬರ್‌ನಲ್ಲಿ ಡೆವಿಲ್ ಸಿನಿಮಾ ತೆರೆಗೆ ಬರಬೇಕಿತ್ತು. ಆದ್ರೆ, ಸದ್ಯದ ಪರಿಸ್ಥಿತಿ ನೋಡಿದ್ರೆ ಡೆವಿಲ್ ಭವಿಷ್ಯ ಏನಾಗಲಿದ್ಯೋ ಅಂತಾ ನಿರ್ಮಾಪಕರ ಪರಿಸ್ಥಿತಿ ಅತಂತ್ರವಾಗಿದೆ.

RELATED ARTICLES

Related Articles

TRENDING ARTICLES