Sunday, September 8, 2024

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಆತ್ಮಹತ್ಯೆಗೆ ಶರಣು

ಬೆಂಗಳೂರು: ಸ್ಯಾಂಡಲ್​ವುಡ್​ ನ ನಿರ್ದೇಶಕ ವಿನೋದ್ ದೋಂಡಾಲೆ ಇಂದು ನೇಣಿಗೆ ಶರಣಾಗಿದ್ದಾರೆ. ನಾಗರಬಾವಿಯ ತಮ್ಮ ನಿವಾಸದಲ್ಲೇ ನೇಣಿಗೆ ಶರಣಾಗಿದ್ದಾರೆ. ಮೃತ ನಿರ್ದೇಶಕ ವಿನೋದ್ ದೋಂಡಾಲೆ ಪತ್ನಿ ಹಾಗೂ ಮೂವರು ಮಕ್ಕಳನ್ನ ಅಗಲಿದ್ದಾರೆ.

ಮೃತ ವಿನೋದ್​ ಅವರು ಪಿ.ಶೇಷಾದ್ರಿ ಹಾಗೂ ಟಿ.ಎನ್ ಸೀತಾರಾಮ್ ಗರಡಿಯಲ್ಲಿ ಪಳಗಿದ್ದ ನಿರ್ದೇಶಕ ನಾಗರಭಾವಿಯ ತಮ್ಮ ನಿವಾಸದಲ್ಲೇ ನೇಣಿಗೆ ಶರಣಾಗಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ವಿನೋದ್​ ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ.

ಇದನ್ನೂ ಓದಿ:  ಜೈನ ಧರ್ಮದವರ ಕ್ಷಮೆ ಕೇಳಿದ ಹಂಸಲೇಖ

ಮೃತ ವಿನೋದ್, ಕಿರುತೆರೆ ಹಾಗು ಬೆಳ್ಳಿತೆರೆ ಎರಡರಲ್ಲೂ ಗುರುತಿಸಿಕೊಂಡಿದ್ದವರು.​ ಸದ್ಯ ನೀನಾಸಂ ಸತೀಶ್ ನಟನೆಯ ಅಶೋಕ ಬ್ಲೇಡ್ ಚಿತ್ರದ ನಿರ್ದೇಶಕ ಮಾಡುತ್ತಿದ್ದರು. ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಬಾಕಿ ಇತ್ತು. ನಿನ್ನೆಯಷ್ಟೇ ನಟ ನೀನಾಸಂ ಸತೀಶ್ ಹಾಗೂ ನಿರ್ಮಾಪಕರ ಜೊತೆ ಶೂಟಿಂಗ್ ಬಗ್ಗೆ ಚರ್ಚಿಸಿದ್ದರು ಎನ್ನಲಾಗಿದೆ.

ವಿನೋದ್ ಆತ್ಮಹತ್ಯೆಗೆ ನಿರ್ದೇಶಕ ಪಿ ಶೇಷಾದ್ರಿ ಸಂತಾಪ:

ನಿರ್ದೇಶಕ ಪಿ.ಶೇಷಾದ್ರಿ ಬಳಿ ವಿನೋದ್​ ದಂಡೋಲೆ ಹಲವು ವರ್ಷಗಳಿಂದ ನಿರ್ದೇಶಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಸಾವಿನ ಸುದ್ದಿ ತಿಳಿದು ಆತಂಕ ವ್ಯಕ್ತಪಡಿಸಿದ್ದಾರೆ. ವಿನೋದ್​ ದೋಂಡಾಲೆ ಸಾಲದ ಸುಳಿಯಲ್ಲಿ ಸುಲಿಕಿದ್ದ, ನನ್ನ ಬಳಿ ಒಂದು ಮಾತಾದ್ರೂ ಹೇಳಬಹುದಿತ್ತಲ್ಲ, ಅವನನ್ನು ಕೊಲೆಯ ಸಲ ಅಶೋಕ ಬ್ಲೇಡ್​ ಮುಹೂರ್ತದಲ್ಲೇ ನೋಡಿದ್ದು ಎಂದು ವಿಷಾದ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES