Sunday, September 8, 2024

ಲೋಕಾಯುಕ್ತ ದಾಳಿ ವೇಳೆ ಚಿನ್ನದ ಮೂಟೆ ಪಕ್ಕದ ಮನೆ ಕಾಂಪೌಂಡ್​ಗೆ ಎಸೆದ ಭ್ರಷ್ಟ ಅಧಿಕಾರಿ!

ಬೆಂಗಳೂರು: ಲೋಕಾಯುಕ್ತ ದಾಳಿ ವೇಳೆ ಮನೆಯಲ್ಲಿದ್ದ ಚಿನ್ನವಸ್ತುಗಳು ತುಂಬಿದ ಬ್ಯಾಗನ್ನು ಭ್ರಷ್ಟ ಅಧಿಕಾರಿಯೊಬ್ಬ ಮಕ್ಕದ ಮನೆಯ ಕಾಂಪೌಂಡ್​ ಒಳಗೆ ಎಸದು ಅಧಿಕಾರಿಗಳ ಕೈಗೆ ಸಿಕ್ಕಿಕೊಂಡಿರುವ ಘಟನೆ ನಡೆದಿದೆ.

ಶುಕ್ರವಾರ ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಏಕಲಾದಲ್ಲಿ ದಾಳಿ ನಡೆಸಿದ್ದಾರೆ. ಅದೇ ರೀತಿ, ಅಥರ್ ಅಲಿ ಎಂಬ ಕಾನೂನು ಮಾಪನ ಇಲಾಖೆ ಡೆಪ್ಯೂಟಿ ಕಂಟ್ರೋಲರ್ ಗೆ ಸೇರಿದ ಕಲ್ಯಾಣ್ ನಗರದ HRBR ಲೇಔಟ್ ನಲ್ಲಿನ ಅಥರ್ ಅಲಿ‌ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು.

ಇದನ್ನೂ ಓದಿ: ಬೆಳ್ಳಂ ಬೆಳಗ್ಗೆ ರಾಜ್ಯಾದ್ಯಂತ ಲೋಕಾಯುಕ್ತ ದಾಳಿ!

ಈ ವೇಳೆ ಬಂಧನ ಭೀತಿಯಲ್ಲಿ ಮನೆಯಲ್ಲಿದ್ದ ಚಿನ್ನದ ಆಭರಣಗಳು, ವಜ್ರದ ಆಭರಣಗಳು, ಬೆಲೆ ಬಾಳುವ ಆಭರಣಗಳನ್ನು ಮೂಟೆಕಟ್ಟಿ ಪಕ್ಕದ ಮನೆಯ ಕಾಂಪೌಂಡ್​ ಒಳಗೆ ಎಸೆದಿದ್ದಾನೆ. ಮೂಟೆ ಬಿದ್ದ ಸದ್ದಿಗೆ ಮನೆಯವರು ಕೂಡಲೆ ಹೊರಗಡೆ ಬಂದು ನೋಡಿದಾಗ ಚಿನ್ನದ ಮೂಟೆ ಕಂಡಿದೆ. ಕೂಡಲೇ ಮನೆಯವರು ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಧಿಕಾರಿಗಳು ಪಕ್ಕದ ಮನೆಗೆ ತೆರಳಿ ಚಿನ್ನ ವಶಕ್ಕೆ ಪಡೆದಿದ್ದಾರೆ. ಚಿನ್ನ ಎಸೆದಿರೋ ಬಗ್ಗೆ ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ಸ್ಪಷ್ಟ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES