Sunday, September 8, 2024

Powertv Impact: KSRTC ಚಾಲಕನ ರೀಲ್ಸ್ ಹುಚ್ಚಾಟಕ್ಕೆ ಅಪಘಾತ: ಪ್ರಕರಣ ದಾಖಲು

ಹುಬ್ಬಳ್ಳಿ: ಬಸ್ ಚಾಲನೆ ಮಾಡುವಾಗ ರೀಲ್ಸ್ ಹುಚ್ಚಾಟಕ್ಕೆ ಬಿದ್ದು ಎರಡು ಎತ್ತುಗಳ ಸಾವಿಗೆ ಕಾರಣವಾಗಿದ್ದ ಕೆಎಸ್ ಆರ್ ಟಿಸಿ ಬಸ್ ಚಾಲಕನ ವಿರುದ್ದ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

KSRTC ಹುಬ್ಬಳ್ಳಿ ಗ್ರಾಮೀಣ ವಿಭಾಗದ ಬಸ್ ಚಾಲಕನಾಗಿರುವ, ಹುಬ್ಬಳ್ಳಿ ತಾಲೂಕು ಹೆಬಸೂರ ಗ್ರಾಮದ ನಿವಾಸಿ ರಮೇಶ್, ರೀಲ್ಸ್​ ಹುಚ್ಚಿಗೆ ಬಿದ್ದಿದ್ದ. ಇತ್ತೀಚೆಗೆ ರಮೇಶ್ ಬಸ್​ ಚಾಲನೆ ಮಾಡುತ್ತಿರುವಾಗಲೇ ರೀಲ್ಸ್​ ಮಾಡಲು ಹೋಗಿ, ಕುಸಗಲ್ ಗ್ರಾಮದ ಬಳಿ ಚಪ್ಪಡಿಗೆ ಡಿಕ್ಕಿ ಹೊಡೆಸಿದ್ದ, ಈ ಅಪಘಾತದಲ್ಲಿ ಚಕ್ಕಡಿಗೆ ಕಟ್ಟಿದ್ದ ಎರಡೂ ಎತ್ತುಗಳು ಸಾವನ್ನಪ್ಪಿದ್ದು, ರೈತ ಮಂಜುನಾಥ್ ಗಂಭೀರವಾಗಿ ಗಾಯಗೊಂಡಿದ್ದರು. ರಮೇಶ್​ ವಿರುದ್ದ ಕುಸುಗಲ್ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: ರೀಲ್ಸ್​ ಮಾಡಲು ಹೋಗಿ 300 ಅಡಿ ಆಳದ ಕಮರಿಗೆ ಬಿದ್ದು ಯುವತಿ ಸಾವು

ಈ ಬಗ್ಗೆ ಪವರ್ ಟಿವಿಯಲ್ಲಿ ವಿಸೃತ ವರದಿ ಪ್ರಸಾರವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು, ಬಸ್​ ಚಾಲಕ ರಮೇಶ್ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ರಮೇಶ್ ವಿರುದ್ದ ನಿರ್ಲಕ್ಷದ ಚಾಲನೆಯ ಪ್ರಕರಣ ದಾಖಲಿಸಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳೂ ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಚಾಲಕ ರಮೇಶ್ ವಿರುದ್ದ ಕ್ರಮ ಜರುಗಿಸಲು ಮುಂದಾಗಿದ್ದಾರೆ.

RELATED ARTICLES

Related Articles

TRENDING ARTICLES