Sunday, September 8, 2024

ಏಕಾದಶಿ ಪ್ರಯುಕ್ತ ಅಪ್ಪುಗೆ ಫೋಟೋ ಮುಂದೆ ಎಡೆ ಇಟ್ಟು ಸದ್ಗತಿ ಪೂಜೆ ಸಲ್ಲಿಸಿದ ಅಭಿಮಾನಿ ಕುಟುಂಬ

ಮಂಡ್ಯ: ಏಕಾದಶಿ ಪ್ರಯುಕ್ತ ದಿ.ನಟ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್ ಅವರ ಫೋಟೋ ಮುಂದೆ ಅಭಿಮಾನಿ ಕುಟುಂಬ ಎಡೆ ಇಟ್ಟು ಸದ್ಗತಿ ಪೂಜೆ ಸಲ್ಲಿಸಿಸುವ ಘಟನೆ ನಡೆದಿದೆ.

ಆಷಾಡ ಮಾಸದ ಏಕಾದಶಿ ದಿನದಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರದಲ್ಲಿರುವ ಅಪ್ಪು ಅಭಿಮಾನಿ ಪ್ರತಾಪ್ ಮನೆಯಲ್ಲಿ ಪುನೀತ್ ರಾಜ್​ ಕುಮಾರ್​ ಫೋಟೋಗೆ ಪೂಜೆ ಸಲ್ಲಿಸಿದ್ದಾರೆ. ಏಕಾದಶಿ ರಾತ್ರಿ ಮನೆಯಲ್ಲಿ ಅಪ್ಪು ಪೋಟೋ ಮುಂದೆ ಮನೆಯಲ್ಲಿ ತಯಾರಿಸಿದ್ದ ಅಡುಗೆ ಜೊತೆಗೆ, ಬಾದುಶಾ, ಜಿಲೇಬಿ, ಮೈಸೂರ್​ ಪಾಕ್​, ವಡೆ, ಹಣ್ಣು ಹಂಪಲುಗಳನ್ನು ಇಟ್ಟು ಪೂಜೆ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ಪರಸ್ತ್ರೀಯೊಂದಿಗೆ ಗಂಡ ರೊಮ್ಯಾನ್ಸ್​: ಪತ್ನಿ ಕೈಗೆ ಸಿಕ್ಕಿಬಿದ್ದ ಪತಿಗೆ ಹಿಗ್ಗಾಮುಗ್ಗಾ ಥಳಿತ

ಈ ಭಾಗದಲ್ಲಿ ಏಕಾದಶಿ ದಿನದಂದು ಅಗಲಿದವರಿಗೆ ಎಡೆ ಇಟ್ಟು ಸದ್ಗತಿಗೆ ಪೂಜೆ ಸಲ್ಲಿಸುವ ಪ್ರತೀತಿ. ಈ ಹಿನ್ನೆಲೆ ತಮ್ಮ ನೆಚ್ಚಿನ ನಟ ಅಪ್ಪು ಮೇಲಿನ ಅಭಿಮಾನ ಇಟ್ಟುಕೊಂಡಿದ್ದ ಪ್ರತಾಪ್ ಕುಟುಂಬವು ಏಕಾದಶಿಯಂದು ಎಡೆ ಇಟ್ಟು ಸದ್ಗತಿ ಪೂಜೆ ಸಲ್ಲಿಸಿದ್ದಾರೆ.

RELATED ARTICLES

Related Articles

TRENDING ARTICLES