Sunday, September 8, 2024

ಜೈಲಿನಲ್ಲಿರೋ ದರ್ಶನ್​ಗೆ ಚಾಮುಂಡೇಶ್ವರಿ ದೇವಿ ಪ್ರಸಾದ

ಮುತ್ತಿನಂತ ಹೆಂಡತಿಯಿದ್ರೂ ಆಕೆಯೆದರೇ ಮತ್ತೊಂದು ಸಂಬಂಧ ಇಟ್ಟುಕೊಂಡಿದ್ದ ದರ್ಶನ್,ಆ ಅಕ್ರಮ ಸಂಬಂಧದ ದೆಸೆಯಿಂದಲೇ ಇವತ್ತು ಜೈಲುಪಾಲಾಗಿದ್ದಾರೆ. ಆದ್ರೆ ಇಷ್ಟೆಲ್ಲಾ ಆದ ಮೇಲೂ ವಿಜಯಲಕ್ಷ್ಮೀ ಮಾತ್ರ ಪತಿಯ ಬಿಡುಗಡೆಗೆ ನಿರಂತರ ಪ್ರಯತ್ನ ಮಾಡ್ತಾ ಇದ್ದಾರೆ. ಒಂದು ವಕೀಲರ ಮೂಲಕ ಬೇಲ್​ಗೆ ಪ್ರಯತ್ನ ಮಾಡ್ತಾ ಇದ್ರೆ, ಇನ್ನೊಂದು ಪತಿಯ ಬಿಡುಗಡೆಗೆ ಪ್ರಾರ್ಥಿಸ್ತಾ ಟೆಂಪಲ್ ರನ್ ಮಾಡ್ತಾ ಇದ್ದಾರೆ.

ಯೆಸ್ ದರ್ಶನ್ ಪತ್ಮಿ ವಿಜಯಲಕ್ಷ್ಮೀಯ ದೊಡ್ಗುಣವನ್ನ ಎಲ್ಲರೂ ಕೊಂಡಾಡ್ತಾ ಇದ್ದಾರೆ. ದರ್ಶನ್ ಜೈಲಿಗೆ ಹೋದ ದಿನದಿಂದಲೂ ವಿಜಯಲಕ್ಷ್ಮೀ ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆ ಗಳಿಸ್ತಾ ಇದೆ. ಅಸಲಿಗೆ ದರ್ಶನ್ ಜೈಲಿಗೆ ಹೋಗೋದಕ್ಕೆ ಕಾರಣ ಅವರ ಮತ್ತು ಪವಿತ್ರಾ ಅಕ್ರಮ ಸಂಬಂಧ.

ಮುತ್ತಿನಂಥಾ ಹೆಂಡತಿ ವಿಜಯಲಕ್ಷ್ಮೀ ಜೊತೆಗಿದ್ರೂ ಪವಿತ್ರಾ ಗೌಡ ಜೊತೆಗೆ ಹಲವು ವರ್ಷಗಳಿಂದ ದರ್ಶನ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ರು. ತಾನೇನೇ ಮಾಡಿದ್ರೂ ನಡೆಯುತ್ತೆ ಅಂತ ಮೆರೀತಾ ಇದ್ದ ದರ್ಶನ್ ಕೊನೆಗೆ ಆ ಸಂಬಂಧದ ದೆಸೆಯಿಂದಲೇ ಜೈಲು ಸೇರಿದ್ದಾರೆ. ಪವಿತ್ರಾಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದ ರೇಣುಕಾಸ್ವಾಮಿಗೆ ಬುದ್ದಿ ಕಲಿಸೋದಕ್ಕೆ ಹೋಗಿ ಜೈಲು ಪಾಲಾಗಿದ್ದಾರೆ.

ಇಷ್ಟು ದಿನ ದರ್ಶನ್ ಹಿಂದೆ ಮುಂದೆ ಓಡಾಡಿಕೊಂಡಿದ್ದವರೆಲ್ಲಾ ಸದ್ಯ ದರ್ಶನ್​ರಿಂದ ಅಂತರ ಕಾಯ್ದುಕೊಳ್ತಾ ಇದ್ದಾರೆ. ಆದ್ರೆ ಪತ್ನಿ ವಿಜಯಲಕ್ಷ್ಮೀ ಮಾತ್ರ ಪತಿಯ ತಪ್ಪನ್ನ ಮನ್ನಿಸಿ ಅವರ ಬೇಲ್​ಗೋಸ್ಕರ ಪ್ರಯತ್ನ ಮಾಡ್ತಾ ಇದ್ದಾರೆ. ಕೋರ್ಟ್​​ನಲ್ಲಿ ಬೇಲ್ ಸಿಗೋದಕ್ಕಾಗಿ ವಕೀಲರ ಹಿಂದೆ ಅಲೀತಾ ಇದ್ದಾರೆ.

ಇನ್ನೂ ಕಾನೂನು ವಿಚಾರದಲ್ಲಿ ಕೆಲಸ ಮಾಡೋದ್ರ ಜೊತೆಗೆ ವಿಜಯಲಕ್ಷ್ಮೀ ದೇವರ ಮುಂದೆಯೂ ತಮ್ಮ ಕೋರಿಕೆಯನ್ನ ಇಟ್ಟುಕೊಂಡು ಅಲೀತಾ ಇದ್ದಾರೆ. ಕೆಲ ದಿನಗಳ ಹಿಂದೆ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ದರ್ಶನ್​ಗಾಗಿ ಪೂಜೆ ಸಲ್ಲಿಸಿದ್ದ ವಿಜಯ ಲಕ್ಷ್ಮೀ ಈಗ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.

ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿ ಅಂದ್ರೆ ದರ್ಶನ್​ಗೂ ತುಂಬಾನೇ ಭಕ್ತಿಭಾವ. ಮೈಸೂರಿಗೆ ಹೋದಾಗಲೆಲ್ಲಾ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಹೋಗಿ ಬರ್ತಾ ಇದ್ರು. ಸದ್ಯ ವಿಜಯಲಕ್ಷ್ಮೀ ಬೆಟ್ಟಕ್ಕೆ ಹೋಗಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು ಪ್ರಸಾದವನ್ನ ಪಡೆದುಕೊಂಡು ಜೈಲಿನಲ್ಲಿರೋ ದರ್ಶನ್​ಗೆ ತಲುಪಿಸಿದ್ದಾರೆ.

ದರ್ಶನ್ ಬಿಡುಗಡೆಗಾಗಿ ಹರಕೆ ಕಟ್ಟಿಕೊಂಡಿರೋ ವಿಜಯಲಕ್ಷ್ಮೀ ಅದಕ್ಕಾಗಿ ಹಲವು ದೇಗುಲಗಳಿಗೆ ಅಲೀತಾ ಇದ್ದಾರೆ. ಥೇಟ್ ನಾ ನಿನ್ನ ಬಿಡಲಾರೆ ಸಿನಿಮಾ ಲಕ್ಷ್ಮೀ ತರಹ ಬಿಡೆನು ನಿನ್ನ ಪಾದ ಅಂತ ದೇವರ ಮೊರೆ ಹೋಗಿದ್ದಾರೆ.

ಸದ್ಯ ಕೊಲೆ ಕೇಸ್​​ನಲ್ಲಿ ಜೈಲು ಸೇರಿರೋ ದರ್ಶನ್​ಗೂ ಪಶ್ಚಾತಾಪ ಕಾಡ್ತಾ ಇದ್ದು, ಪತ್ನಿ ಭೇಟಿ ಬಂದಾಗ ಅವರೆದ್ರು ಕ್ಷಮೆ ಕೇಳಿದ್ದಾರಂತೆ. ತನ್ನದು ತಪ್ಪಾಯ್ತು. ಇನ್ನುಮುಂದೆ ನಿನ್ನ ಜೊತೆ ನ್ಯಾಯವಾಗಿ ಬಾಳ್ವೆ ಮಾಡ್ತಿನಿ ಅಂತ ಮಾತುಕೊಟ್ಟಿದ್ದಾರಂತೆ.

ದರ್ಶನ್ ಈ ಕೇಸ್​​ನಿಂದ ಬಚಾವ್ ಆಗಿ ಬಂದರೆ ಸಾಕು ನೆಮ್ಮದಿಯಾಗಿ ಪತಿ, ಪುತ್ರನ ಬದುಕಬೇಕು ಅಂತ ವಿಜಯಲಕ್ಷ್ಮೀ ಕನಸು ಕಂಡಿದ್ದಾರೆ. ಅದಕ್ಕಾಗೆ ಹರಕೆಯನ್ನೂ ಕಟ್ಟಿದ್ದಾರೆ. ಆದ್ರೆ ಆ ಹರಕೆ ಫಲಿಸುತ್ತಾ ಅನ್ನೋದು ಮಾತ್ರ ಅನುಮಾನ.

RELATED ARTICLES

Related Articles

TRENDING ARTICLES