Sunday, September 8, 2024

ಬಿಎಂಟಿಸಿ ಕಚೇರಿಯಲ್ಲಿ ನೇಣಿಗೆ ಶರಣಾದ ಸಿಬ್ಬಂದಿ!

ಬೆಂಗಳೂರು: ಬಿಎಂಟಿಸಿ ಸಿಬ್ಬಂದಿಯೋರ್ವ ಕಚೇರಿಯಲ್ಲಿಯೇ ಆತ್ಮಹತ್ಯೆ ಶರಣಾಗಿರುವ ಘಟನೆ ಶಾಂತಿನಗರದ ಬಿಎಂಟಿಸಿ ಕಚೇರಿಯಲ್ಲಿ ನಡೆದಿದೆ.

ಅಥಣಿ ಮೂಲದ ಮಹೇಶ್​ (42) ಆತ್ಮಹತ್ಯೆಗೆ ಶರಣಾದ ಸಿಬ್ಬಂದಿ, ಬೆಂಗಳೂರಿನ ಶಾಂತಿನಗರದ ಮೂರನೇ ಫ್ಲೋರ್​ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ: ಸ್ವಾಮಿ PM ರಿಪೋರ್ಟ್​ ತಿರುಚೋ ಯತ್ನ ? ದರ್ಶನ್​ ಗ್ಯಾಂಗ್​ಗೆ ಗ್ರಿಲ್

ಮೃತ ಮಹೇಶ್​ ಕುಡಿತಕ್ಕೆ ದಾಸನಾಗಿದ್ದ ಆದ್ದರಿಂದ ಇತ್ತೀಚೆಗೆ ಕುಟುಂಬದವರು ಕುಡಿತ ಬಿಡಿಸಿದ್ದರು ಎನ್ನಲಾಗಿದೆ. ಸೋಮವಾರ ಬೆಳಗ್ಗೆ ಕಚೇರಿಯ ಸೆಕ್ಯೂರಿಟಿ ಗಾರ್ಡ್​ ಬಳಿ ರೇಕಾರ್ಡ್​ ರೂಂ ನ ಕೀ ಕೇಳಿ ಪಡೆದುಕೊಂಡಿದ್ದ, ಬೆಳಗ್ಗೆಯಿಂದ ಸಂಜೆಯ ವರೆಗೆ ಅಲ್ಲೇ ಓಡಾಡಿಕೊಂಡಿದ್ದ, ನೆನ್ನೆ ಸಂಜೆ ಕಚೇರಿಯಲ್ಲಿ ಯಾರು ಇಲ್ಲದ ವೇಳೆ ವೈಯರ್​ನಿಂದ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸ್ಥಳಕ್ಕೆ ವಿಲ್ಸನ್​ ಗಾರ್ಡನ್​ ಪೊಲೀಸರು ಭೇಟಿ ನೀಡಿದ್ದು ಪರಿಶಿಲನೆ ನಡೆಸಿದ್ದೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES