Sunday, September 8, 2024

ಬಹಿರ್ದೆಸೆಗೆ ಹೋದ 10 ವರ್ಷದ ಬಾಲಕಿ ಶವವಾಗಿ ಪತ್ತೆ!

ವಿಜಯನಗರ: ಬಹಿರ್ದೆಸೆಗೆ ಹೋಗಿದ್ದ 10 ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಡಗಲಿ ತಾಲೂಕಿನ ದುಂಗಾವತಿ ತಾಂಡದಲ್ಲಿ ನಡೆದಿದೆ.

ಶನಿವಾರ ಸಂಜೆ 4.30ರ ಸುಮಾರಿಗೆ 10 ವರ್ಷದ ಬಾಲಕಿ ಬಹಿರ್ದೆಸೆಗೆ ತೆರಳಿದ್ದಳು, ಬಹಿರ್ದೆಸೆಗೆ ಹೋದ ಮಗಳು ಇಷ್ಟೊತ್ತಾದರೂ ವಾಪಾಸ್​ ಬಂದಿಲ್ಲ ಎಂದು ಪೋಷಕರು ಸ್ಥಳಕ್ಕೆ ಹೊಗಿ ನೋಡಿದಾಗ ಬಾಲಕಿ ಮೃತ ದೇಹ ಪತ್ತೆಯಾಗಿದೆ, ಈ ವೇಳೆ ಬಹಿರ್ದೆಸೆಗೆ ಕೊಂಡೆಯ್ದಿದ್ದ ಚೆಂಬು ಒಂದೆಡೆ ಬಿದ್ದಿದ್ದರೇ, ಬಾಲಕಿ ಒಂದೆಡೆ ಬಿದ್ದಿದ್ದಾಳೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: ಕೃಷಿ ಹೊಂಡಕ್ಕೆ ಬಿದ್ದು ಪ್ರೇಮಿಗಳು ಆತ್ಮಹತ್ಯೆ

ಕೂಡಲೇ ಬಾಲಕಿಯನ್ನು ಚಿಕಿತ್ಸೆಗಾಗಿ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿತ್ತು ಆದರೇ ಅದಾಗಲೇ ಬಾಲಕಿ ಕೊಲೆಯುಸಿರೆಳೆದಿದ್ದಳೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ SP ಶ್ರೀಹರಿಬಾಬು, ಶಾಸಕ ಕೃಷ್ಣಾ ನಾಯ್ಕ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಂಬ್ರಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES