Sunday, September 8, 2024

ಜಾನುವಾರುಗಳ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ!

ಹಾಸನ: ಜಮೀನಿಗೆ ನುಗ್ಗಿ ಬೆಳೆ ಹಾಳುಮಾಡಿವೆ ಎಂದು ಜಾನುವಾರುಗಳ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆಮಾಡಿದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಡೆಕೆರೆ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಪವರ್ ಟಿವಿಗೆ ‘ಸುಪ್ರೀಂ’ ಪವರ್!

ಗ್ರಾಮದ ಹರೀಶ್​​ ಎಂಬುವವರಿಗೆ ಸೇರಿದ ಎರಡು ಹಸುಗಳು ಇದೇ ಗ್ರಾಮದ ಈರಯ್ಯ ಎಂಬುವವರ ಹೊಲಕ್ಕೆ ತೆರಳಿ ಫಸಲು ನಾಶ ಮಾಡಿದ್ದವು. ಇದಕ್ಕೆ ಸಿಟ್ಟಿಗೆದ್ದ ಈರಯ್ಯ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಹರೀಶ್​ ಆರೋಪಿಸಿದ್ದಾರೆ. ಹಸುಗಳ ಕಾಲು, ಹೊಟ್ಟೆ, ಕುತ್ತಿಗೆ ಭಾಗಕ್ಕೆ ತೀವ್ರ ಗಾಯವಾಗಿದೆ. ಮೂಕ ಪ್ರಾಣಿಗಳು ತೀವ್ರ ನೋವಿನಿಂದ ನರಳುತ್ತಿವೆ. ಜಾನುವಾರುಗಳಿಗೆ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಲಾಗಿದೆ.

ಘಟನೆ ಸಂಬಂಧ ಯಸಳೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES