Sunday, September 8, 2024

ಹಾಡ ಹಗಲೇ ಶಿರಸ್ತೇದಾರ್​ ಗೆ ಚಾಕುವಿನಿಂದ ಇರಿತ

ಬೀದರ್: ಕರ್ತವ್ಯ ನಿರತ ಶಿರಸ್ತೆದಾರ್​ ಮೇಲೆ ಹಾಡಹಗಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿರುವ ಘಟನೆ ಬೀದರ್​ ತಹಶಿಲ್ದಾರ್​ ಕಚೇರಿಯಲ್ಲಿ ಇಂದು ನಡೆದಿದೆ.

ಇದನ್ನೂ ಓದಿ: ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣು

ಅನಿಲ್​ ಕುಮಾರ್​ ವ್ಯಾಸ್​ ಚಾಕು ಇರಿತಕ್ಕೆ ಒಳಗಾದ ಶಿರಸ್ತೆದಾರ್​, ಅಮನ್​ ಜುಬೇರ್​ ಹಲ್ಲೆ ನಡೆಸಿ ಪರಾರಿಯಾದ ವ್ಯಕ್ತಿ. ಸದ್ಯ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬ್ರಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಡಗೈ ಭುಜಕ್ಕೆ ಗಂಭೀರ ಗಾಯಗಳಾಗಿರುವ ಹಿನ್ನೆಲೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

ಹಲ್ಲೆ ಹಾಗು ಚಾಕು ಇರಿತಕ್ಕೆ ಪ್ರಮುಖ ಕಾರಣವೇನೆಂದು ಸ್ಪಷ್ಟವಾಗಿ ತಿಳಿದುಬಂದಿಲ್ಲ, ಈ ಘಟನೆಯೂ ಬೀದರ್​ನ ಮಾರ್ಕೆಟ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

Related Articles

TRENDING ARTICLES