ಬೆಂಗಳೂರು: ಬೆಂಗಳೂರಿನ ನೈಸ್ ರಸ್ತೆ ಬಳಿಯ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ವಿದ್ಯಾರ್ಥಿನಿ ಅಂಜನಾ(20) ಮತ್ತು ಶ್ರೀಕಾಂತ್ (25) ಸಾವನ್ನಪ್ಪಿರುವ ದುರ್ದೈವಿಗಳು, ಈ ಇಬ್ಬರು ಜುಲೈ 1 ರಂದು ನಾಪತ್ತೆಯಾಗಿದ್ದರು. ಇದೀಗ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ದರ್ಶನ್ ಖೈದಿ ನಂಬರ್ ಬಳಸಿ ಮಗುವಿನ ಫೋಟೋ ಶೂಟ್: ಮಕ್ಕಳ ಆಯೋಗದಿಂದ ದೂರು ದಾಖಲು
ತಲಘಟ್ಟಪುರ ಅಂಜನಾಪುರ ನಿವಾಸಿಯಾದ ಅಂಜನಾ ಮತ್ತು ಕೋಣನಕುಂಟೆ ನಿವಾಸಿ ಶ್ರೀಕಾಂತ್ ಇಬ್ಬರು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು, ಯುವ ಜೋಡಿಯ ಪ್ರೀತಿಗೆ ವಿದ್ಯಾರ್ಥಿನಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು, ಇದೇ ಕಾರಣಕ್ಕಾಗಿ ಈ ಜೋಡಿ ಜುಲೈ 1 ರಂದು ನಾಪತ್ತೆಯಾಗಿದ್ದರು.
ಅಂಜನಾ ಮತ್ತು ಶ್ರೀಕಾಂತ್ ನಾಪತ್ತೆ ಹಿನ್ನೆಲೆ ಪೋಷಕರು ಕೋಣನಕುಂಟೆ ಹಾಗು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.