Friday, July 5, 2024

ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ

ಬೆಂಗಳೂರು: ಬೆಂಗಳೂರಿನ ನೈಸ್​ ರಸ್ತೆ ಬಳಿಯ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ವಿದ್ಯಾರ್ಥಿನಿ ಅಂಜನಾ(20) ಮತ್ತು ಶ್ರೀಕಾಂತ್​ (25) ಸಾವನ್ನಪ್ಪಿರುವ ದುರ್ದೈವಿಗಳು, ಈ ಇಬ್ಬರು ಜುಲೈ 1 ರಂದು ನಾಪತ್ತೆಯಾಗಿದ್ದರು. ಇದೀಗ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ದರ್ಶನ್​ ಖೈದಿ ನಂಬರ್​ ಬಳಸಿ ಮಗುವಿನ ಫೋಟೋ ಶೂಟ್: ಮಕ್ಕಳ ಆಯೋಗದಿಂದ ದೂರು ದಾಖಲು

ತಲಘಟ್ಟಪುರ ಅಂಜನಾಪುರ ನಿವಾಸಿಯಾದ ಅಂಜನಾ ಮತ್ತು ಕೋಣನಕುಂಟೆ ನಿವಾಸಿ ಶ್ರೀಕಾಂತ್​ ಇಬ್ಬರು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು, ಯುವ ಜೋಡಿಯ ಪ್ರೀತಿಗೆ ವಿದ್ಯಾರ್ಥಿನಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು, ಇದೇ ಕಾರಣಕ್ಕಾಗಿ ಈ ಜೋಡಿ ಜುಲೈ 1 ರಂದು ನಾಪತ್ತೆಯಾಗಿದ್ದರು.

ಅಂಜನಾ ಮತ್ತು ಶ್ರೀಕಾಂತ್​ ನಾಪತ್ತೆ ಹಿನ್ನೆಲೆ ಪೋಷಕರು ಕೋಣನಕುಂಟೆ ಹಾಗು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

 

RELATED ARTICLES

Related Articles

TRENDING ARTICLES