Friday, July 5, 2024

ದರ್ಶನ್​ ಜೈಲಿಂದ ಹೊರಗೆ ಬಂದ್ರೆ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸುತ್ತೇವೆ: ನಿರ್ಮಾಪಕ ಕೆ.ಮಂಜು

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಅವರೊಟ್ಟಿಗೆ ಲಂಕೇಶ್​​ ಪತ್ರಿಕೆ ಸಿನಿಮಾ ಮಾಡಿದ್ದೆ ಅವತ್ತಿನ ದರ್ಶನ್​ ಹೇಗೆ ಇದ್ದರೋ ಈಗಲೂ ಹಾಗೆಯೇ ಇದ್ದಾರೆ ಎಂದು ಚಲನಚಿತ್ರ ನಿರ್ಮಾಪಕ ಕೆ.ಮಂಜು ಅವರು ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಜೈಲು ಸೇರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ದರ್ಶನ್ ಅವರು ತುಂಬಾ ಬಡತನದಿಂದ ಬಂದ ಹುಡುಗ, ಅವರು ಕೆಟ್ಟವರು ಅಲ್ಲ, ತನ್ನಿಂದ ಒಳ್ಳೆಯದು ಆಗುತ್ತದೆ ಎಂದರೆ ಬನ್ನಿ ಸಿನಿಮಾ ಮಾಡೋಣಾ ಎನ್ನುತ್ತಾರೆ. ನಮ್ಮ ನಿರ್ಮಾಪಕರಿಗೆ ಹೆಚ್ಚು ಆದ್ಯತೆ ಕೊಡುತ್ತಾರೆ ಎಂದರು.

ಇದನ್ನೂ ಓದಿ: ಮಗನನ್ನೇ ಕೈದಿ ಮಾಡಿದ ದರ್ಶನ್​ ಹುಚ್ಚು ಫ್ಯಾನ್!

ಸದ್ಯ ಈ ರೀತಿ ಘಟನೆಯಾಗಬಾರದಿತ್ತು ಆಗಿದೆ. ಇತ್ತೀಚೆಗೆ ಭೇಟಿಯಾಗಿ ದರ್ಶನ್​ ಅವರಿಗೆ ಅಡ್ವಾನ್ಸ್ ಕೊಟ್ಟಿದ್ದೇನೆ. ಅವರು ಜೈಲಿನಿಂದ ಬಂದರೇ ರೇಣುಕಾಸ್ವಾಮಿ ಕುಟುಂಬ ನ್ಯಾಯಾ ಒದಗಿಸುತ್ತೇವೆ. ನ್ಯಾಯ ಕೊಡಿಸುವ ಬಗ್ಗೆ ಕೋರ್ಟ್​ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಇನ್ನು ತಪ್ಪು ಎಲ್ಲರಿಂದ ಆಗುತ್ತದೆ‌ ನಾವು ಕಣ್ಣಿಂದ ನೋಡಿದ್ದೇವೆ. ದರ್ಶನ್ ಅವರು ಒಳ್ಳೆಯವರು ಸ್ನೇಹಜೀವಿ. ಕೆಲವರ ಜೊತೆ ಮನಸ್ತಾಪವಿದೆ. ಅವರು ಹೊರಬರದಂತೆ ರಾಜಕೀಯ ನಾಯಕರ ಕೈವಾಡವಿದೆ. ಕುಮಾರಸ್ವಾಮಿ ಹೆಸರು ಹೇಳಿ ಅವರು ಆ ರೀತಿ ವ್ಯಕ್ತಿಯಲ್ಲ. ಕುಮಾರಸ್ವಾಮಿ ದೊಡ್ಡ ವ್ಯಕ್ತಿ, ಅವರು ಆ ರೀತಿ ವ್ಯಕ್ತಿಯಲ್ಲ. ಕುಮಾರಣ್ಣ ಆ ರೀತಿ ಇದ್ದಿದ್ದರೆ ಗೆಲ್ಲುತ್ತಾ ಇರಲಿಲ್ಲ. ಚಿತ್ರರಂಗ ಅಂದರೆ ಅವರಿಗೆ ಒಳ್ಳೆ ಗೌರವ ಇದೆ ಎಂದು ನಿರ್ಮಾಪಕ ಕೆ. ಮಂಜು ಅವರು ದರ್ಶನ್​ ಪರ ಮಾತಾಡಿದ್ದಾರೆ.

RELATED ARTICLES

Related Articles

TRENDING ARTICLES