Sunday, September 8, 2024

ನೇಣು ಬಿಗಿದ ಸ್ಥಿತಿಯಲ್ಲಿ ಗರ್ಭಿಣಿ ಮಹಿಳೆ ಶವ ಪತ್ತೆ!

ಮೈಸೂರು: ಅನುಮಾನವೆಂಬ ಭೂತಕ್ಕೆ ಗರ್ಭಿಣಿ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸೌಮ್ಯಶ್ರೀ (27) ಮೃತ ದುರ್ದೈವಿ, ಮೈಸೂರಿನ ಮಾನಸಿ ನಗರ ಬಿಎಸ್​ಎನ್​ಎಲ್​ ಲೇಔಟ್​ನ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: POCSO ಪ್ರಕರಣ: ಯಡಿಯೂರಪ್ಪ ಬಂಧನಕ್ಕೆ ವಾರೆಂಟ್​ ಜಾರಿ ಮಾಡಿದ ಕೋರ್ಟ್​

ಕಳೆದ ಆರು ತಿಂಗಳ ಹಿಂದೆ ಬೆಂಗಳೂರು ಮೂಲದ ಶ್ರೀಧರ್​​ ಎಂಬುವವರ ತಮ್ಮ ಮಗಳು ಸೌಮ್ಯಶ್ರೀಯನ್ನು ಮೈಸೂರಿನ ಮಂಜುನಾಥ್​ ಎಂಬುವವರ ಜೊತೆಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದಗಿನಿಂದ ಸೌಮ್ಯಳ ನಡತೆಯ ಮೇಲೆ ಪತಿ ಮಂಜುನಾಥ್​ ಅನುಮಾನ ಪಡುತ್ತಿದ್ದ, ಹೀಗಾಗಿ ಮಂಜುನಾಥ್​ ಹಾಗೂ ಮನೆಯವರೆಲ್ಲ ಸೇರಿ ಸೌಮ್ಯಳನ್ನ ಕೊಲೆ ಮಾಡಿದ್ದಾರೆ ಎಂದು ಮೃತ ಸೌಮ್ಯಳ ಪೋಷಕರು ಆರೋಪ ಮಾಡಿದ್ದಾರೆ.

ಘಟನೆ ಸಂಬಂಧ ಮೈಸೂರಿನ ಸೌತ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

RELATED ARTICLES

Related Articles

TRENDING ARTICLES