ಬೆಂಗಳೂರು: ಎರಡು ದಿನಗಳ ಹಿಂದೆ ಮನೆಯಿಂದ ಹೊರಹೋಗಿದ್ದ ಮೃತ ರೇಣುಕಾಸ್ವಾಮಿ ಮನೆಗೆ ವಾಪಾಸ್ಸಾಗುತ್ತಾನೆ ಎನ್ನುವ ಭರವಸೆಯಲ್ಲಿದ್ದ ಪೋಷಕರು ಮನಗ ಸಾವಿನ ಸುದ್ದಿ ತಿಳಿದು ಕಣ್ಣೀರಿಟ್ಟಿದ್ದಾರೆ.
ಈ ಕುರಿತು ರೇಣುಕಾಸ್ವಾಮಿ ತಂದೆ ಶಿವನಗೌಡ ಅವರು ಪವರ್ ಟಿವಿಯೊಂದಿಗೆ ಮಾತನಾಡಿ, ಶನಿವಾರ ಸಂಜೆ ನನ್ನ ಮಗನನ್ನು ಕರೆದೊಯ್ದರು ಆದರೆ ಆಮೇಲೆ ಏನಾಗಿದೆ ಎನ್ನುವುದು ಗೊತ್ತಿಲ್ಲ, ನನ್ನ ಮಗ ಬರ್ತಾನೆ ಬಿಡು ಎಂದು ಸುಮ್ಮನಿದ್ದೆವು ಆದರೇ ಈಗ ಹೀಗಾಗಿದೆ ಎಂದು ಮನಗ ನೆನೆದು ಕಣ್ಣೀರಿಟ್ಟಿದ್ದಾರೆ.
ಇನ್ನೂ ಓದಿ: ಕೊಲೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನ!
ದರ್ಶನ್ ಆಪ್ತಗೆಳತಿಗೆ ಅಶ್ಲೀಲ ಮೆಸೇಜ್ ಗಳಿಸಿದ್ದ ಎನ್ನುವ ಕಾರಣಕ್ಕೆ ನಟ ದರ್ಶನ್ ಸಹಚರರು ಜೂನ್9 ರಂದು ಸಂಜೆ ಚಿತ್ರದುರ್ಗದಿಂದ ಬೆಂಗಳೂರಿನ ಕಾಮಾಕ್ಷಿಪಾಳ್ಯಕ್ಕೆ ಕರೆತಂದು ದರ್ಶನ್ ಆಪ್ತ ನವೀನ್ ಎನ್ನುವವರ ಕಾರ್ ಶೆಡ್ನಲ್ಲಿರಿಸಿ ಬಳಿಕ ಹಲ್ಲೆ ನಡೆಸಿದ್ದರು. ಈ ವೇಳೆ ಮರ್ಮಾಂಗದ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ರೇಣುಕಾ ಸಾವನ್ನಪ್ಪಿದರು.