Monday, July 1, 2024

ನಟ ದರ್ಶನ್​ ನಿಂದ ರೇಣುಕಾಸ್ವಾಮಿ ಕೊಲೆ: ಮಗನ ನೆನೆದು ಕಣ್ಣೀರಿಟ್ಟ ತಂದೆ

ಬೆಂಗಳೂರು: ಎರಡು ದಿನಗಳ ಹಿಂದೆ ಮನೆಯಿಂದ ಹೊರಹೋಗಿದ್ದ ಮೃತ ರೇಣುಕಾಸ್ವಾಮಿ ಮನೆಗೆ ವಾಪಾಸ್ಸಾಗುತ್ತಾನೆ ಎನ್ನುವ ಭರವಸೆಯಲ್ಲಿದ್ದ ಪೋಷಕರು ಮನಗ ಸಾವಿನ ಸುದ್ದಿ ತಿಳಿದು ಕಣ್ಣೀರಿಟ್ಟಿದ್ದಾರೆ.

ಈ ಕುರಿತು ರೇಣುಕಾಸ್ವಾಮಿ ತಂದೆ ಶಿವನಗೌಡ ಅವರು ಪವರ್​ ಟಿವಿಯೊಂದಿಗೆ ಮಾತನಾಡಿ, ಶನಿವಾರ ಸಂಜೆ ನನ್ನ ಮಗನನ್ನು ಕರೆದೊಯ್ದರು ಆದರೆ ಆಮೇಲೆ ಏನಾಗಿದೆ ಎನ್ನುವುದು ಗೊತ್ತಿಲ್ಲ, ನನ್ನ ಮಗ ಬರ್ತಾನೆ ಬಿಡು ಎಂದು ಸುಮ್ಮನಿದ್ದೆವು ಆದರೇ ಈಗ ಹೀಗಾಗಿದೆ ಎಂದು ಮನಗ ನೆನೆದು ಕಣ್ಣೀರಿಟ್ಟಿದ್ದಾರೆ.

ಇನ್ನೂ ಓದಿ: ಕೊಲೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಬಂಧನ!

ದರ್ಶನ್​ ಆಪ್ತಗೆಳತಿಗೆ ಅಶ್ಲೀಲ ಮೆಸೇಜ್​ ಗಳಿಸಿದ್ದ ಎನ್ನುವ ಕಾರಣಕ್ಕೆ ನಟ ದರ್ಶನ್​ ಸಹಚರರು ಜೂನ್​9 ರಂದು ಸಂಜೆ ಚಿತ್ರದುರ್ಗದಿಂದ ಬೆಂಗಳೂರಿನ ಕಾಮಾಕ್ಷಿಪಾಳ್ಯಕ್ಕೆ ಕರೆತಂದು ದರ್ಶನ್​ ಆಪ್ತ ನವೀನ್​ ಎನ್ನುವವರ ಕಾರ್ ಶೆಡ್​ನಲ್ಲಿರಿಸಿ ಬಳಿಕ ಹಲ್ಲೆ ನಡೆಸಿದ್ದರು. ಈ ವೇಳೆ ಮರ್ಮಾಂಗದ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ರೇಣುಕಾ ಸಾವನ್ನಪ್ಪಿದರು.

RELATED ARTICLES

Related Articles

TRENDING ARTICLES