Saturday, July 6, 2024

ನಟ ದರ್ಶನ್ ಬಂಧನ: ನಿಜವಾಯ್ತು ಶ್ರೀಗಳ ಕಾಲಜ್ಞಾನ ಭವಿಷ್ಯ

ಬೆಂಗಳೂರು : ನಟ ಚಾಲೆಂಜಿಂಗ್​ ಸ್ಟಾರ್​ ಕುರಿತು ಕಾಲಜ್ಞಾನ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದ ಭವಿಷ್ಯ ನಿಜವಾಗಿದೆ.

ಕಳೆದ ಎರಡು ತಿಂಗಳ ಹಿಂದೆ ದಿ.(3/04/2024)ರಂದು ಪವರ್​ ಟಿವಿಯಲ್ಲಿ ನಟ ದರ್ಶನ್​ ಕುರಿತು ಶ್ರೀಗಳು ನಿಡಿದ ಕಾಲಜ್ಞಾನ ಭವಿಷ್ಯದ ಬಗ್ಗೆ ಪ್ರಕಟಿಸಲಾಗಿತ್ತು. ಅವರ ಕಾಲಜ್ಞಾನದಂತೆ ಇಂದು ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ: ಕೊಲೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಬಂಧನ!

ಎರಡು ತಿಂಗಳ ಹಿಂದೆ ಪ್ರಕಟವಾಗಿದ್ದ ಶ್ರೀಗಳ ಕಾಲಜ್ಞಾನದಲ್ಲಿ, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರಿಗೆ ಈ ವರ್ಷ ಶತ್ರುಗಳಿಂದ ತೊಂದರೆ ಹಾಗೂ ಅನಾರೋಗ್ಯ ಬಾಧೆ ಉಂಟಾಗಲಿದೆ ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದರು.

ಕ್ರೋಧಿ ನಾಮ ಸಂವತ್ಸರದ ವಿಶೇಷತೆ ಹಾಗೂ ಸಂವತ್ಸರದ ಫಲಗಳ ಬಗ್ಗೆ ಅವರು ಪವರ್ ಟಿವಿಗೆ ಮಾಹಿತಿ ನೀಡಿದ್ದು, ನಟ ದರ್ಶನ್​ ಅವರಿಗೆ ಹೆಚ್ಚು ಅನಾಹುತಗಳು ಕಾದಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಟ ದರ್ಶನ್​ಗೆ ಶತ್ರುಗಳಿಂದ ತೊಂದರೆ, ಅನಾರೋಗ್ಯ ಬಾಧೆ : ಸಿದ್ಧಲಿಂಗ ಶ್ರೀ ಭವಿಷ್ಯ

ಕನ್ನಡ ಚಿತ್ರರಂಗದ ಖ್ಯಾತ ನಟರಾದ ದರ್ಶನ್ ತೂಗುದೀಪ ಅವರು ಬಹಳ ಕಷ್ಟದಿಂದ ಮೇಲೆ ಬಂದಿದ್ದಾರೆ. ಅವರ ಪ್ರತಿಭೆ, ಅವರು ಪಡೆದಿರುವ ಪ್ರಖ್ಯಾತಿ ಹಾಗೂ ಅವರು ಸಂಪಾಧಿಸಿರುವ ಅಭಿಮಾನಿ ಬಳಗ ನಮ್ಮೆಲ್ಲರಿಗೂ ಸಂತೋಷದಾಯಕವಾದ ಮತ್ತು ಹೆಮ್ಮೆಯ ವಿಷಯವಾಗಿದೆ ಎಂದು ಶ್ರೀಗಳು ಮನದುಂಬಿ ಶ್ಲಾಘಿಸಿದ್ದಾರೆ.

 

ಆದರೆ, ಈ ವರ್ಷ ನಟ ದರ್ಶನ್​ ಅವರಿಗೆ ಅನೇಕ ರೀತಿಯಿಂದ ಶತ್ರುಗಳ ತೊಂದರೆ ಉಂಟಾಗಲಿದೆ. ದರ್ಶನ್​​ ಅವರಿಗೆ ಅನಾರೋಗ್ಯ ಬಾಧೆ ಕಾಡಲಿದೆ. ಮಾನಹಾನಿಗಳು, ಅನೇಕ ರೀತಿಯ ದುಷ್ಕೃತ್ಯಗಳ ಪ್ರಯೋಗದಿಂದ ದರ್ಶನ್ ಅವರ ನೆಮ್ಮದಿ ಹಾಳಾಗುತ್ತದೆ ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ.

ರಕ್ಷಣಾವಲಯ ಹೆಚ್ಚು ಮಾಡಿಕೊಳ್ಳಿ:

ನಟ ದರ್ಶನ್ ಅವರು ಎಚ್ಚರಿಕೆ ವಹಿಸುವುದು ಅತ್ಯವಶ್ಯಕವಾಗಿದೆ. ಮತ್ತು ನಿಮ್ಮ ರಕ್ಷಣಾವಲಯವನ್ನು ಹೆಚ್ಚು ಮಾಡುವುದು ಸೂಕ್ತ ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES