Monday, July 1, 2024

ನಟ ದರ್ಶನ್​ ಆಪ್ತಗೆಳತಿ ಪವಿತ್ರಾ ಗೌಡ ಬಂಧನ

ಬೆಂಗಳೂರು: ಕೊಲೆ ಪ್ರಕಣದಲ್ಲಿ ನಟ ದರ್ಶನ್​ ಬಂಧನದ ಬೆನ್ನಲ್ಲೇ ದರ್ಶನ್​ ಆಪ್ತ ಗೆಳತಿ ಪವಿತ್ರಾ ಗೌಡ ರನ್ನು ಬೆಂಗಳೂರಿನ ಆರ್​.ಆರ್​ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಎಂಬುವವರು ಅಶ್ಲೀಲ ಫೋಟೋ ಕಳಿಸಿದ ಎಂಬ ಕಾರಣಕ್ಕೆ ನಟ ದರ್ಶನ್​ ಸಹಚರರು ರೇಣುಕಾಸ್ವಾಮಿ ಎಂಬುವವರನ್ನು ಚಿತ್ರದುರ್ಗದಿಂದ ಕಾಮಾಕ್ಷಿಪಾಳ್ಯಕ್ಕೆ ಕರೆತಂದು ಕಾರ್​ ಶೆಡ್​ನಲ್ಲಿರಿಸಿ ಹಲ್ಲೆ ನಡೆಸಿದ್ದರು. ಮರ್ಮಾಂಗಕ್ಕೆ ಹಲ್ಲೆ ಮಾಡಿದ ಕಾರಣ ರೇಣುಕಾಸ್ವಾಮಿ ಸಾವಿಗೀಡಾದಿದ್ದಾರೆ.

ಇದನ್ನೂ ಓದಿ: ಪವಿತ್ರಾ ಗೌಡಗೆ ಮೆಸೇಜ್​ ಮಾಡಿದ್ದಕ್ಕೆ ನಟ ದರ್ಶನ್​ನಿಂದ ಯುವಕನ ಕೊಲೆ

ಈ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್​ ನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ಡಿಸಿಪಿ ಗಿರೀಶ್​ ಮತ್ತು ಎಸಿಪಿ ಚಂದನ್​ ರಿಂದ ವಿಚಾರಣೆ ನಡೆಯುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಇದೀಗ ಆರ್​ಆರ್​ ನಗರ ಪೊಲೀಸರು ಬಂಧಿಸಿದ್ದಾರೆ.

RELATED ARTICLES

Related Articles

TRENDING ARTICLES