Sunday, September 8, 2024

ಒಂದೇ ಕುಟುಂಬದ ನಾಲ್ವರಿಂದ ಸಾಮೂಹಿಕ ಆತ್ಮಹತ್ಯೆಗೆ ಯತ್ನ

ಚಾಮರಾಜನಗರ: ಒಂದೇ ಕುಟುಂಬದ ನಾಲ್ವರು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಹದೇಶ್ವರ ಬೆಟ್ಟದ ತಪ್ಪಲಿನ ತಾಳೆ ಬೆಟ್ಟದಲ್ಲಿ ನಡೆದಿದೆ.

ಕೆ.ಆರ್​ ನಗರ ತಾಲೂಕು ಚಂದಗಾಲು ಗ್ರಾಮಕ್ಕೆ ಸೇರಿದ ಒಂದೇ ಕುಟುಂಬದ ಸದಸ್ಯರು ಆತ್ಮಹತ್ಯೆ ಯತ್ನಸಿದ್ದಾರೆ. ಪತಿ ಮಹಾದೇವನಾಯಕ ವಿಷ ಸೇವಿಸಿ ಸಾವನ್ನಪ್ಪಿದ ದುರ್ದೈವಿ, ಇವರೊಂದಿಗೆ ವಿಷ ಸೇವನೆ ಮಾಡಿದ್ದ ಪತ್ನಿ ಗೌರಮ್ಮ, ಮಗಳು ಲೀಲಾವತಿ, ಮೊಮ್ಮಗಳು ರಿಷಿಕಾರನ್ನು ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಯ ದಾಖಲಿಸಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಇವರ ಸ್ಥಿತಿ ಚಿಂತಾಜನಕವಾಗಿದೆ.

ಇದನ್ನೂ ಓದಿ: ಚುನಾವಣೆ ವೇಳೆ ಬಾರ್​ ಬಂದ್​: 5 ದಿನಕ್ಕೆ ಒಂದು ಸಾವಿರ ಕೋಟಿ ನಷ್ಟ

ಇನ್ನು ಒಂದೇ ಕುಟುಂಬ ಸದಸ್ಯರ ಸಾಮೂಹಿಕ ಆತ್ಮಹತ್ಯೆ ಯತ್ನಕ್ಕೆ ನಿಖರವಾದ ಕಾರಣ ನಿಗೂಢವಾಗಿದ್ದು ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES