Tuesday, July 9, 2024

ನಿಜವಾಯ್ತು ಶ್ರೀಗಳ ಕಾಲಜ್ಞಾನ ಭವಿಷ್ಯ!

ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್​ ಮೋಹನ್​ ಬಗ್ಗೆ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಈ ಹಿಂದೆ ನುಡಿದಿದ್ದ ಭವಿಷ್ಯ ಇದೀಗ ನಿಜವಾಗಿದೆ.

2022 ರಲ್ಲಿಯೇ ಶ್ರೀಮಠದ ಸ್ವಾಮೀಜಿಗಳು ಆಂಧ್ರಪ್ರದೇಶದ ರಾಜಕಾರಣದಲ್ಲಿ ಭಾರಿ ಬದಲಾವಣೆಗಳು ನಡೆಯಲಿದೆ ಎನ್ನುವ ಸುಳಿವನ್ನು ನೀಡಿದ್ದರು. ಅಂದಿನ ಮುಖ್ಯಮಂತ್ರಿ ಶ್ರೀ ಜಗನ್​ ಮೋಹನ್​ ರೆಡ್ಡಿಯವರಿಗೆ ಜಾತಕದಲ್ಲಿ ಉಂಟಾಗುವ ಗ್ರಹಗತಿಗಳ ಏರುಪೇರು, ರಾಹುವಿನ ತೊಂದರೇ ಮತ್ತು ದಶಾ ತೊಂದರೆಗಳು ಇರುವುದರಿಂದ ಎಚ್ಚರಿವಹಿಸುವಂತೆ ಭವಿಷ್ಯ ನುಡಿದಿದ್ದರು.

ಇದನ್ನೂ ಓದಿ: ಶನೈಶ್ಚರ ಸ್ವಾಮಿ ಮಹಾಯಾಗದ ಮಹತ್ವವೇನು ಗೊತ್ತಾ?

ಇದರಲ್ಲಿ ಶತ್ರುಗಳು ಮೇಲುಗೈ ಸಾಧಿಸುವ ಎಲ್ಲಾ ಸಾಧ್ಯತೆಗಳು ಇವೆ ಎನ್ನುವ ಮಾಹಿತಿಯನ್ನು ಅವರು ನೀಡಿದರು, ಆದ್ದರಿಂದ ಬಡವರ, ದೀನದಲಿತರ, ನೊಂದವರ ಸೇವೆ ಮಾಡಿದರೆ ಶ್ರೀ ಸಿದ್ದಲಿಂಗೇಶ್ವರರ ಅನುಗ್ರಹ ದೊರೆಯಲಿದೆ ಎನ್ನುವ ಪರಿಹಾರ ಬೋದನೆಯನ್ನು ಮಾಡಿದ್ದರು.

ಇದನ್ನು ಪಾಲಿಸದ ಹಿನ್ನೆಲೆ 2024 ರಲ್ಲಿ ಜಗನ್​ ಮೋಹನ್​ ರೆಡ್ಡಿ ಪಕ್ಷವೂ ಹೀನಾಯವಾಗಿ ಸೋಲು ಅನುಭವಿಸುವಂತಾಯಿತು ಎಂದು ಶ್ರೀಗಳು ತಿಳಿಸಿದ್ದಾರೆ.

ಈ ರೀತಿಯ ವಿಶೆಷ ಭವಿಷ್ಯವನ್ನು ಸ್ವಾಮೀಜಿಗಳು ಪ್ರತಿ ತಿಂಗಳು ವಿಶೇಷ ದಿನಗಳಂದು ಪ್ರಕಟಿಸುವ ಮೂಲಕ ಎಚ್ಚರಿಕೆಯನ್ನು ನೀಡುತ್ತಾ ಬಂದಿದ್ದಾರೆ. ಧರ್ಮಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES