Saturday, July 6, 2024

ಚಂದನ್​ ಮತ್ತು ನಿವೇದಿತಾ ಡೈವರ್ಸ್​ಗೆ ಕಾರಣ ಬಿಚ್ಚಿಟ್ಟ ಲಾಯರ್​!

ಬೆಂಗಳೂರು: ಬಿಗ್​ಬಾಸ್​ ಕನ್ನಡ ಸೀಸನ್​ -5 ನ ಸ್ಪರ್ಧಿಗಳಾದ ಕನ್ನಡದ ರ್ಯಾಪರ್ ಚಂದನ್​ ಶೆಟ್ಟಿ ಹಾಗು ನಿವೇದಿತಾ ಗೌಡ ಅವರು ತಮ್ಮ ದಾಂಪತ್ಯ ಜೀವನಕ್ಕೆ ಎಳ್ಳುನೀರು ಬಿಟ್ಟಿದ್ದು ನಾಲ್ಕು ವರ್ಷದ ದಾಂಪತ್ಯಕ್ಕೆ ಈ ಜೋಡಿ ದಿಢೀರ್ ಎಂಡ್ ಕಾರ್ಡ್​ ಹಾಕಿದ್ದಾರೆ.

ಈ ಇಬ್ಬರ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಿತ್ತು. ರೀಲ್ಸ್​ಗಳ ಮೂಲಕ ಬಾರಿ ಸದ್ದು ಮಾಡುತ್ತಿದ್ದರು. ಇವರ ರೀಲ್ಸ್​ ಗೆ ಸಾವಿರಾರು ಲೈಕ್ಸ್​ ಕಮೆಂಟ್ಸ್​ಗಳು ಕೂಡ ಹರಿದು ಬರುತ್ತಿದ್ದವು. ಇಷ್ಟು ಅನ್ಯೋನ್ಯವಾಗಿದ್ದ ಈ ಜೋಡಿ ಇದೀಗ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವುದು ಅಭಿಮಾನಿಗಳಿಗೆ ಶಾಕ್​ ಉಂಟುಮಾಡಿದೆ.

ಇದನ್ನೂ ಓದಿ: ಚಂದನ್​ ಶೆಟ್ಟಿ ಮತ್ತು ನಿವೇದಿತಾ ದಾಂಪತ್ಯ ಜೀವನ ಅಂತ್ಯ!  

ಇನ್ನು, ಒಂದೇ ದಿನದಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡಗೆ ಡಿವೋರ್ಸ್ ಸಿಕ್ಕಿದ್ದು ಹೇಗೆ ಎಂಬುವುದರ ಬಗ್ಗೆ ವಕೀಲೆ ಅನಿತಾ ಪವರ್​ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಇಬ್ಬರು ಆರು ತಿಂಗಳ ಹಿಂದೆ ಡಿವೋರ್ಸ್ ನಿರ್ಧಾರ ಮಾಡಿದ್ದರು. ಇಬ್ಬರು ಒಪ್ಪಿಗೆಯಿಂದಲೇ ವಿಚ್ಛೇದನ ತೆಗೆದುಕೊಂಡಿದ್ದಾರೆ. ಈ ಇಬ್ಬರ ಕಾನೂನು ಪ್ರಕ್ರಿಯೆ ಪೂರ್ಣಗೊಂಡಿದೆ. ಯಾವುದೇ ಕಂಡಿಷನ್, ಬೇಡಿಕೆ ಏನು ಇರಲಿಲ್ಲ. ಭವಿಷ್ಯದ ಕಾರಣಕ್ಕೆ ಒಟ್ಟಾಗಿ ಹೋಗಲು ಸಾಧ್ಯವಿಲ್ಲ ಅಂತ ನಿರ್ಧರಿಸಿದ್ದಾರೆ. ಹೀಗೆ ಮಾತನ್ನು ಮುಂದುವರೆಸಿದ ಅವರು, ಈ ಪ್ರಕ್ರಿಯೆಯನ್ನು ಕಾನೂನುಬದ್ಧವಾಗಿಯೇ ನಡೆದಿದೆ. ಜೊತೆಗೆ ಇರಲು ಸಾಧ್ಯವೇ ಇಲ್ಲ ಅಂದ್ರೆ ವಿಚ್ಛೇದನ ಪಡೆಯಬಹುದು ಅಂತ ಕಾನೂನಿನಲ್ಲಿದೆ.

ಅಮರ್ ದೀಪ್ ವರ್ಸಸ್ ಅರವಿಂದ್ ಕೌರ್ ಅಂತ ಒಂದು ಜಡ್ಜ್ ಮೆಂಟ್ ಇದೆ. ಅದೇ ಪ್ರಕಾರ ನಾವು ಈ ಕೇಸ್​ ಹಾಕಿಕೊಂಡಿದ್ದೇವೆ. ಈ ಪ್ರಕ್ರಿಯೆ ಬೇಗ ಖಾತರಿ ಆಯ್ತು. ಫೈಲ್​ ಮಾಡಿದ್ದು ಜೂನ್​ 6ಕ್ಕೆ. ಜೂನ್ 7ರಂದು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಕೋರ್ಟ್​ ಮುಂದೆ ಹಾಜರು ಪಡೆಸಿದ್ದೆವು. ಈ ಹಿಂದೆಯೇ ಇಬ್ಬರು ನಿರ್ಧಾರ ಮಾಡಿಕೊಂಡಿದ್ದರು. ಹೀಗಾಗಿ ಈ ಪ್ರೋಸಿಜರ್ ಬೇಗ ಆಯ್ತು ಅಂತ ಹೇಳಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES