Friday, July 5, 2024

ಭವಾನಿ ರೇವಣ್ಣಗೆ ಕ್ಯಾನ್ಸರ್!

ಬೆಂಗಳೂರು: ಕೆ.ಆರ್.ನಗರ ಮಹಿಳೆ ಕಿಡ್ನ್ಯಾಪ್‌ ಕೇಸ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭವಾನಿ ರೇವಣ್ಣ ಬಗ್ಗೆ ಮತ್ತೊಂದು ಆಘಾತಕಾರಿ ವಿಷಯ ಹೊರ ಬಿದ್ದಿದೆ. ಭವಾನಿ ರೇವಣ್ಣಗೆ ಕ್ಯಾನ್ಸರ್‌ ಖಾಯಿಲೆ ಇರೋ ಬಗ್ಗೆ ಭವಾನಿ ಪರ ವಕೀಲರು ಇಂದು ರಿವೀಲ್‌ ಮಾಡಿದ್ದಾರೆ.

ನ್ಯಾಯಾಲಯದಲ್ಲಿ ಇಂದು ನಿರೀಕ್ಷಣಾ ಜಾಮೀನು ಅರ್ಜಿ ವಿಚಾರವಾಗಿ ನಡೆಯುತ್ತಿದ್ದ ವಾದವಿವಾದಗಳ ವೇಳೆ ಭವಾನಿ ರೇವಣ್ಣಗೆ ಕ್ಯಾನ್ಸರ್‌ ಇದೆ ಹೀಗಾಗಿ ಅವರಿಗೆ ಚಿಕಿತ್ಸೆ ಅಗತ್ಯವಿದೆ ಸುಖಾಸುಮ್ಮನೆ ಏನೇನೋ ಆರೋಪ ಮಾಡೋದು ಬೇಡ. ಹೀಗಾಗಿ ಭವಾನಿಗೆ ಜಮೀನು ನೀಡಬೇಕೆಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಇಷ್ಟು ದಿನ ಗೌಪ್ಯವಾಗಿದ್ದ ಮಾಹಿತಿ ಇದೀಗ ರಿವೀಲ್‌ ಆಗಿದೆ.

ಇದನ್ನೂ ಓದಿ: ಪ್ರಜ್ವಲ್​ ರೇವಣ್ಣ ಪ್ರಕರಣದಿಂದ ಪಕ್ಷಕ್ಕೆ ಯಾವುದೇ ಎಫೆಕ್ಟ್​ ಆಗಲ್ಲ: ಜಿ.ಟಿ ದೇವೇಗೌಡ

ಕೆ.ಆರ್​ ನಗರದ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಈ ಹಿಂದೆ SIT ನೀಡಿದ ನೋಟೀಸ್​ಗೆ ಭವಾನಿ ಯಾವುದೇ ಉತ್ತರ ನೀಡಿರಲಿಲ್ಲ, ಬಳಿಕ ಮತ್ತೊಂದು ನೋಟೀಸ್​ ನೀಡಲಾಗಿತ್ತು. ಬಳಿಕ ತಮ್ಮ ಮನೆಯಲ್ಲಿ ವಿಚಾರಣೆಗೆ ಸಹಕರಿಸುವುದಾಗಿ ತಿಳಿಸಿದ್ದರು. ಅದರಂತೆ ಜೂನ್ ​1 ರಂದು ಹೊಳೆನರಸಿಪುರದ ಮನೆಯಲ್ಲಿಯೇ ವಿಚಾರಣೆ ನಡೆಸಲು SIT ತಂಡ ತಯಾರಿ ನಡೆಸಿದೆ.

RELATED ARTICLES

Related Articles

TRENDING ARTICLES