Monday, July 8, 2024

ಇಂದು ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಲಿರುವ ಕಾಮಾಂಧ ಪ್ರಜ್ವಲ್​

ಬೆಂಗಳೂರು: ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿ ಒಂದು ತಿಂಗಳಿಗೂ ಹೆಚ್ಚು ಕಾಲ ತಲೆ ಮರೆಸಿಕೊಂಡಿದ್ದ ಕಾಮಾಂಧ ಕೊನೆಗೂ ಬೆಂಗಳೂರಿಗೆ ಆಗಮಿಸುತ್ತಿದ್ದಾನೆ.

ಜರ್ಮಿನಿಯ ಮ್ಯೂನಿಚ್​ನಿಂದ ಮಧ್ಯಾಹ್ನ 2.30ಕ್ಕೆ ಟೇಕ್ ಆಫ್​ ಆದ ವಿಮಾನದಲ್ಲಿ ಪ್ರಜ್ವಲ್​​​​ ಪ್ರಯಾಣ ಬೆಳೆಸಿದ್ದು ಇಂದು ಮಧ್ಯರಾತ್ರಿ 12.30ಕ್ಕೆ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್​ ಆಗಲಿದ್ದಾನೆ.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ SIT ಸಿದ್ಧತೆ:

ಜರ್ಮನಿಯಿಂದ ಮ್ಯೂನಿಕ್​ನಿಂದ ಸಂಸದ ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಆಗಮಿಸಲಿದ್ದು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಂಸದ ಪ್ರಜ್ವಲ್​ ಬಂಧನಕ್ಕೆ SIT ತಂಡ​​​ ಫುಲ್ ಅಲರ್ಟ್‌ ಆಗಿದೆ. ಈಗಾಗಲೇ ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ಗೆ SIT ಅಧಿಕಾರಿಗಳು ಭೇಟಿ ನೀಡಿ ಏರ್‌ಪೋರ್ಟ್​​ನ ಇಮಿಗ್ರೇಷನ್‌ ಬಳಿ ತೆರಳಿ ಪ್ರಜ್ವಲ್‌ ಆಗಮದ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಜರ್ಮನಿಯಿಂದ ಪ್ರಜ್ವಲ್‌ ರೇವಣ್ಣ ಏರ್‌ಪೋರ್ಟ್‌ಗೆ ಬರ್ತಿದ್ದಂತೆ ಪ್ರಜ್ವಲ್‌ ಅರೆಸ್ಟ್‌ ಮಾಡಲು SIT ಅಧಿಕಾರಿಗಳು ಸಜ್ಜಾಗಿದ್ದಾರೆ.

ಪ್ರಜ್ವಲ್​ ಬಂಧನಕ್ಕೆ ಒತ್ತಾಯಿಸಿ ಹಾಸನ ಚಲೋ:

ಸಂಸದ ಪ್ರಜ್ವಲ್​ ರೇವಣ್ಣ ರಾಸಲೀಲೆಗಳನ್ನು ಖಂಡಿಸಿ ಅಮಾಯಕ ಹೆಣ್ಣುಮಕ್ಕಳ ಬಾಳನ್ನು ಹಾಳು ಮಾಡಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಇಂದು ಹಾಸನದಲ್ಲಿ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಪ್ರಗತಿಪರರು, ಪ್ರತಿಭಟನಾಕಾರರು ಆಗಮಿಸಿ ಪ್ರತಿಭಟಿಸಿದರು.

RELATED ARTICLES

Related Articles

TRENDING ARTICLES