Sunday, September 8, 2024

ಅನಾಮಿಕನ ಬೆತ್ತಲೆ ಓಡಾಟಕ್ಕೆ ಬೆಚ್ಚಿ ಬಿದ್ದ ಜನ

ದೇವನಹಳ್ಳಿ: ಅನಾಮಿಕ ವ್ಯಕ್ತಿಯೋರ್ವ ಬೆತ್ತಲಾಗಿ ಮನೆಗಳ ಕಾಂಪೌಂಡ್​ಗಳನ್ನು ಹಾರಿಕೊಂಡು ಸುತ್ತಾಡುತ್ತಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಅಶೋಕ್​​ ನಗರದಲ್ಲಿ ಈ ಘಟನೆ ನಡೆದಿದ್ದು, ಈ ಅನಾಮಿಕನ ಬೆತ್ತಲೆ ಓಡಾಟದಿಂದ ಇಲ್ಲಿನ ಜನರಿಗೆ ಬಾರಿ ಕಿರಿಕಿರಿಯಾಗುತ್ತಿದ್ದು, ಇಲ್ಲಿನ ಮಹಿಳೆಯರು ಭಯಭೀತರಾಗಿದ್ದಾರೆ. ಸ್ಥಳೀಯರು ಈ ದೃಶ್ಯಗಳನ್ನು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಮಾನಸಿಕ ಅಸ್ವಸ್ತತೆಯಿಂದ ಈ ರೀತಿ ಬೆತ್ತಲೆಯಾಗಿ ಓಡಾಟ ನಡೆಸಿರುವ ಶಂಕೆಯನ್ನು ಜನರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯರ ಖಾತೆಗೆ ಒಂದು ಲಕ್ಷ: ಪೋಸ್ಟ್​ ಆಫೀಸ್​ ಅಕೌಂಟ್​ ತೆರೆಯಲು ಮುಗಿಬಿದ್ದ ಜನ 

ಈ ಘಟನೆಯ ಕುರಿತು ಅಶೋಕ ನಗರದ ಜನರು ವಿಜಯಪುರ ಪೊಲೀಸರಿಗೆ ದೂರ ನೀಡಿದ್ದು ಅನಾಮಿಕ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES