Sunday, September 8, 2024

ಪಂಜುರ್ಲಿ ದೈವದ ಪವಾಡ: ನ್ಯಾಯಾಲಯಕ್ಕೆ ಶರಣಾದ ಕೊಲೆ ಆರೋಪಿ

ಬೆಂಗಳೂರು: ಒಂದು ವರ್ಷದ ಹಿಂದೆ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿಯೋರ್ವ ಪಂಜುರ್ಲಿ ದೈವದ ಆಜ್ಞೆಯಂತೆ ಏಕಾಏಕಿ ಉಡುಪಿ ನ್ಯಾಯಾಲಯಕ್ಕೆ ಶರಣಾಗಿರುವ ಅಪರೂಪದ ಘಟನೆ ನಡೆದಿದೆ.

ಯೋಗೀಶ್​ ಆಚಾರ್ಯ ನ್ಯಾಯಾಲಯಕ್ಕೆ ಶರಣಾದ ಆರೋಪಿ, ಫೆಬ್ರವರಿ 5, 2023 ರಂದು ಉಡುಪಿಯ ಕಾಪುವಿನ ಪಾಂಗಾಳದಲ್ಲಿ ಯೋಗೇಶ್​ ಆಚಾರ್ಯ ಎಂಬಾತನ ಕೊಲೆ ನಡೆದಿತ್ತು. ಈ ಪ್ರಕರಣದ ಬಳಿಕ ಒಂದು ವರ್ಷಕ್ಕೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದ. ಈ ಕೊಲೆಯ ಹಿಂದೆ ಭೂಗತ ಪಾತಕಿ ಕಲಿ ಯೋಗೀಶ ಕೈವಾಡವಿದ್ದು ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಹಲವರ ಬಂಧನ ಮಾಡಲಾಗಿತ್ತು.

ಇದನ್ನೂ ಓದಿ: ಮಹಿಳೆಯರ ಖಾತೆಗೆ ಒಂದು ಲಕ್ಷ: ಪೋಸ್ಟ್​ ಆಫೀಸ್​ ಅಕೌಂಟ್​ ತೆರೆಯಲು ಮುಗಿಬಿದ್ದ ಜನ

ಕೊಲೆ ನಡೆದ ಬಳಿಕ ಪ್ರಮುಖ ಆರೋಪಿಯ ಪತ್ತೆಗೆಂದು ಮೃತ ಯೋಗೇಶ್​ ಆಚಾರ್ಯ ಕುಟುಂಬವು ಪಂಜುರ್ಲಿ ದೈವದ ಮೊರೆ ಹೋಗಿತ್ತು. ಕೊಲೆಗೆ ಸಂಬಂಧಿಸಿ ಸೂಕ್ತ ನ್ಯಾಯದ ಭರವಸೆಯನ್ನು ದೈವವು ನಿಡಿತ್ತು. ಇದರಂತೆ 15 ತಿಂಗಳುಗಳ ಬಳಿಕ ಪ್ರಕರಣದ ಪ್ರಮುಖ ಆರೋಪಿಯೂ ತಾನಾಗಿಯೇ ಬಂದು ಉಡುಪಿ ನ್ಯಾಯಾಲಯದಲ್ಲಿ ಶರಣಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಒಂದು ವರ್ಷಕ್ಕೂ ಅಧಿಕ ಕಾಲದಿಂದ ತಲೆಮರೆಸಿಕೊಂಡಿದ್ದ ಆರೋಪಿ ಇದೀಗ ಕೋರ್ಟ್‌ಗೆ ಶರಣಾಗಿರುವುದರ ಹಿಂದೆ ಪಂಜುರ್ಲಿ ದೈವದ ಮಹಿಮೆ ಇದೆ ಎಂದು ಸ್ಥಳೀಯರು ನಂಬಿದ್ದಾರೆ. ಪ್ರಕರಣದ ಸಂಬಂಧ ಈಗಾಗಲೇ ಹಲವರ ಬಂಧನ ನಡೆದಿದೆ.

RELATED ARTICLES

Related Articles

TRENDING ARTICLES