ಚಿಕ್ಕಬಳ್ಳಾಪುರ: ಪ್ರಜ್ವಲ್ ರೇವಣ್ಣ ವೀಡಿಯೋ ಬಿಡುಗಡೆ ಮಾಡಿರುವುದು ನನಗೆ ಸಮಾಧಾನ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಒಂದು ತಿಂಗಳ ಬಳಿಕ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷವಾಗಿದ್ದು ವಿದೇಶದಿಂದ ವಿಡಿಯೋ ಬಿಡುಗಡೆ ಮಾಡಿದ್ದಾರೆ ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕೂಡಲೇ ವಿದೇಶದಿಂದ ಮರಳಿ ದೇಶಕ್ಕೆ ವಾಪಾಸ್ಸಾಗಿ ವಿಶೇಷ ತಿನಿಖಾ ತಂಡದ ವಿಚಾರಣೆಗೆ ಹಾಜರಾಗುವಂತೆ ದೇವೇಗೌಡರು ಎಚ್ಚರಿಕೆ ಕೊಟ್ಟಿದ್ದರು. ನಾನೂ ಕೂಡ ಮನವಿ ಮಾಡಿದ್ದೆ ಕಾರ್ಯಕರ್ತರ ಮೇಲೆ ಗೌರವವಿದ್ದರೆ ತಕ್ಷಣ ವಾಪಾಸ್ ಬರುವಂತೆ ಹೇಳಿದ್ದೇ. ಇದೀಗ ವಿಡಿಯೋ ಬಿಡುಗಡೆ ಮಾಡಿರುವುದು ನಮಗೆ ಸಮಾಧಾನ ತಂದಿದೆ ಎಂದು ಹೇಳಿದರು.
ಇದನ್ನೂ ಓದಿ: ಒಂದು ತಿಂಗಳ ಬಳಿಕ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ: 31ರಂದು ದೇಶಕ್ಕೆ ವಾಪಾಸ್
SIT ಮುಂದೆ ವಿಚಾರಣೆಗೆ ಹಾಜರಾದ ಬಳಿಕ ಸತ್ಯಾಸತತಿಗಳು ಹೊರಬರಲಿದೆ, ಯಾರೆಲ್ಲ ಷಡ್ಯಂತ್ರ ಎಸಗಿದ್ದಾರೆ? ಯಾರು ತಪ್ಪು ಮಾಡಿದ್ದಾರೆ? ಎಂಬುದು ಹೊರಗಡೆ ಬರಲಿದೆ. ಈಗಲಾದರೂ ಪ್ರಜ್ವಲ್ ರೇವಣ್ಣಗೆ ಕಾರ್ಯಕರ್ತರ ಬಗ್ಗೆ ಮಮತೆ ಇದೆ ಅಂತ ತೋರಿಸಿಕೊಂಡಿದ್ದಾನೆ ನನಗು ಸಮಾಧಾನ ತಂದಿದೆ ಎಂದು ಅವರು ಹೇಳಿದರು.