Saturday, May 4, 2024

ನಾನು ಸಹ ಉಚ್ಛಾಟನೆ ಬಯಸುತ್ತಿದ್ದೆ, ಯಾವ ಉಚ್ಛಾಟನೆಗೂ ಹೆದರಲ್ಲ : ಈಶ್ವರಪ್ಪ ಗುಡುಗು

ಶಿವಮೊಗ್ಗ : ನನಗೆ ಯಾವುದೇ ಉಚ್ಛಾಟನೆ ಪತ್ರ ಬಂದಿಲ್ಲ. ನಾನು ಸಹ ಉಚ್ಛಾಟನೆ ಬಯಸುತ್ತಿದ್ದೆ. ನಾನು ಯಾವ ಉಚ್ಛಾಟನೆಗೂ ಹೆದರುವುದಿಲ್ಲ ಎಂದು ಸ್ವಪಕ್ಷದ ವಿರುದ್ಧವೇ ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಗುಡುಗಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾನು ಗೆದ್ದು ನರೇಂದ್ರ ಮೋದಿಯವರ ಕೈ ಹಿಡಿಯುತ್ತೇನೆ. ನನಗೆ ರೈತರ ಚಿಹ್ನೆ ಸಿಕ್ಕಿರುವುದು ಸಂತಸ ಆಗಿದೆ. ರೈತನ ಹೆಸರಿನಲ್ಲಿ ವೋಟ್ ಕೋಡಿ ಎನ್ನಲು ಸಂತೋಷ ಆಗುತ್ತೆ. ರೈತನ ಹೆಸರಿನಲ್ಲಿ, ಮೋದಿ ಹೆಸರಿನಲ್ಲಿ ಮತ ಕೇಳುತ್ತೇನೆ ಎಂದು ಹೇಳಿದ್ದಾರೆ.

ನಾನು ಸಹ ಉಚ್ಛಾಟನೆಯ ನೀರಿಕ್ಷೆ ಮಾಡುತ್ತಿದ್ದೆ. ಇಡೀ ಕ್ಷೇತ್ರದ ಜನ ಅಪ್ಪ ಹಾಗೂ ಮಕ್ಕಳ ಸುಳ್ಳಿಗೆ ಬೈಯುತ್ತಿದ್ದಾರೆ. ಯಾವ ಮುಖ ಇಟ್ಟುಕೊಂಡು ನನ್ನ ಬಗ್ಗೆ ಯಡಿಯೂರಪ್ಪ ಪ್ರತಿಕ್ರಿಯೆ ಕೊಡ್ತಾರೆ. ಎಲ್ಲಾ ಹಿಂದುತ್ವವಾದಿಗಳನ್ನು ಯಡಿಯೂರಪ್ಪ ಹಿಂದೆ ಸರಿಸಿದ್ದಾರೆ. ಬಿಜೆಪಿ ಶುದ್ದೀಕರಣ ಮಾಡಲು ಹೊರಟಿರುವುದೇ ನನಗೆ ಸಂತೋಷ ಎಂದು ತಿಳಿಸಿದ್ದಾರೆ.

ಐದು ಬಾರಿ ಬಿಜೆಪಿಯಿಂದ ಗೆದ್ದಿದ್ದೇನೆ

ಇಡೀ ರಾಜ್ಯದ ಜನ ನನಗೆ ಬೆಂಬಲ ಕೊಡುತ್ತಿದ್ದಾರೆ. ಕಮಲ ಚಿಹ್ನೆ ಇಲ್ಲದೆ ಸ್ಪರ್ಧೆ ಮಾಡುತ್ತಿರುವುದು  ಕೇವಲ ತಾತ್ಕಾಲಿಕ. ಕಮಲ ಚಿಹ್ನೆ ಇಲ್ಲದೆ ಮೊದಲ ಬಾರಿ ಸ್ಪರ್ಧೆ ಮಾಡುತ್ತಿದ್ದೇನೆ. ಐದು ಬಾರಿ ಬಿಜೆಪಿಯಿಂದ ಗೆದ್ದಿದ್ದೇನೆ. ಆಣೆ ಮಾಡಿ ಜನ ಹೇಳುತ್ತಿದ್ದಾರೆ ನಿಮಗೆ ವೋಟು ಮಾಡುತ್ತೇವೆ ಅಂತ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES