Friday, May 3, 2024

ಭಾರಿ ಮಳೆ: ಲಾಡ್ಜ್ ಮೇಲಿಂದ ಬಿದ್ದು ವ್ಯಕ್ತಿ ಸಾವು!

ಯಾದಗಿರಿ : ಲಾಡ್ಜ್​ ಮೇಲೆ ನಿಂತಿದ್ದ ಮಳೆನೀರು ತೆರವು ಮಾಡುವ ವೇಳೆ ವ್ಯಕ್ತಿಯೊಬ್ಬ ಕಾಲುಜಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಹಳೆ ಬಸ್ ನಿಲ್ದಾಣದಲ್ಲಿ ನಡೆದಿದೆ.

ಇದನ್ನೂ ಓದಿ: ಮಗಳಿಗೆ ರಕ್ಷಣೆ ಕೊಟ್ಟಿದ್ದಕ್ಕೆ ತಂದೆಯ ಕಾಲು ಮುರಿದ ಪಾಗಲ್​ ಪ್ರೇಮಿ ಅಂಡ್​ ಗ್ಯಾಂಗ್​

ಅಶೋಕ ಕಟ್ಟಿಮನಿ (40) ಮೃತ ವ್ಯಕ್ತಿ. ಈತ ಆಶ್ರಯ ಲಾಡ್ಜ್​ನಲ್ಲಿ ಬಟ್ಟೆ ಒಗೆಯುವ ಕೆಲಸ ಮಾಡುತ್ತಿದ್ದ.  ಯಾದಗಿರಿ ನಗರದಲ್ಲಿ ಶನಿವಾರ ಸುರಿದ ಭಾರಿ ಮಳೆಯಿಂದಾಗಿ ಮನೆಗಳು ಮತ್ತು ಕಟ್ಟಡಗಳ ಮೇಲೆ ನೀರು ನಿಂತಿತ್ತು, ನಗರದ ಆಶ್ರಯ ಲಾಡ್ಜ್​ ಕಟ್ಟಡದ ಮೇಲೆ ನಿಂತಿದ್ದ ನೀರನ್ನು ತೆರುವುಗೊಳಿಸುವ ವೇಳೆ ಕಾಲುಜಾರಿ ಬಿದ್ದು ಅಶೋಕ್​ ಕಟ್ಟಿಮನಿ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಯಾದಗಿರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES