ಯಾದಗಿರಿ : ಲಾಡ್ಜ್ ಮೇಲೆ ನಿಂತಿದ್ದ ಮಳೆನೀರು ತೆರವು ಮಾಡುವ ವೇಳೆ ವ್ಯಕ್ತಿಯೊಬ್ಬ ಕಾಲುಜಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಹಳೆ ಬಸ್ ನಿಲ್ದಾಣದಲ್ಲಿ ನಡೆದಿದೆ.
ಇದನ್ನೂ ಓದಿ: ಮಗಳಿಗೆ ರಕ್ಷಣೆ ಕೊಟ್ಟಿದ್ದಕ್ಕೆ ತಂದೆಯ ಕಾಲು ಮುರಿದ ಪಾಗಲ್ ಪ್ರೇಮಿ ಅಂಡ್ ಗ್ಯಾಂಗ್
ಅಶೋಕ ಕಟ್ಟಿಮನಿ (40) ಮೃತ ವ್ಯಕ್ತಿ. ಈತ ಆಶ್ರಯ ಲಾಡ್ಜ್ನಲ್ಲಿ ಬಟ್ಟೆ ಒಗೆಯುವ ಕೆಲಸ ಮಾಡುತ್ತಿದ್ದ. ಯಾದಗಿರಿ ನಗರದಲ್ಲಿ ಶನಿವಾರ ಸುರಿದ ಭಾರಿ ಮಳೆಯಿಂದಾಗಿ ಮನೆಗಳು ಮತ್ತು ಕಟ್ಟಡಗಳ ಮೇಲೆ ನೀರು ನಿಂತಿತ್ತು, ನಗರದ ಆಶ್ರಯ ಲಾಡ್ಜ್ ಕಟ್ಟಡದ ಮೇಲೆ ನಿಂತಿದ್ದ ನೀರನ್ನು ತೆರುವುಗೊಳಿಸುವ ವೇಳೆ ಕಾಲುಜಾರಿ ಬಿದ್ದು ಅಶೋಕ್ ಕಟ್ಟಿಮನಿ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಯಾದಗಿರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.