Friday, May 3, 2024

ಮಗಳಿಗೆ ರಕ್ಷಣೆ ಕೊಟ್ಟಿದ್ದಕ್ಕೆ ತಂದೆಯ ಕಾಲು ಮುರಿದ ಪಾಗಲ್​ ಪ್ರೇಮಿ ಅಂಡ್​ ಗ್ಯಾಂಗ್​

ರಾಯಚೂರು : ಪ್ರೀತಿ ಪ್ರೇಮ ವಿಚಾರಕ್ಕೆ ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದಂತ ದಾರುಣ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ರಾಯಚೂರಿ ಜಿಲ್ಲೆ ಸಿಂಧನೂರು ತಾಲೂಕಿನಲ್ಲಿ ನಡೆದಿದೆ.

ಪ್ರೀತಿ ಪ್ರೇಮ ಎಂದು ನೇಹಾ ಎಂಬ ಯುವತಿಗೆ ನಿತ್ಯ ಟಾರ್ಚರ್​ ಕೊಡುತ್ತಿದ್ದ ಯುವಕನಿಂದ ಮಗಳನ್ನು ರಕ್ಷಿಸಲು ಯುವತಿಯ ಪೋಷಕರು ಬೇರೆ ಊರಿನಲ್ಲಿರುವ ಸಂಬಧಿಕರ ಮನೆಗೆ ಕಳಿಸಿದ್ದಕ್ಕೆ ಪಾಗಲ್​ ಪ್ರೇಮಿ ಮತ್ತು ತಂಡ ಸೇರಿಕೊಂಡು ಯುವತಿಯ ತಂದೆಯನ್ನು ಬೀದಿಯಲ್ಲಿ ಅಟ್ಟಾಡಿಸಿ ಹಲ್ಲೆ ಮಾಡಿ ಕಾಲು ಮುರಿದಿದ್ದಾರೆ, ಅಷ್ಟೆ ಅಲ್ಲದೇ ಯುವತಿಯ ತಾಯಿಯ ಸೀರೆ ಹಿಡಿದು ಎಳೆದಾಡಿದ್ದಾರೆ, ಯುವತಿಯ ಸಹೋದರ ಹಾಗು ಸಂಬಂಧಿಯ ಮೇಲೂ ಹಲ್ಲೆ ನಡೆಸಿದ್ದಾರೆ. ಕೂಡಲೆ ಮಗಳನ್ನು ವಾಪಾಸ್​ ಕರೆಸುವಂತೆ ಒತ್ತಡ ಹಾಕಿದ್ದಾರೆ. ಸದ್ಯ ಗಂಭೀರವಾಗಿ ಹಲ್ಲೆಗೊಳಗಾದ ಯುವತಿಯ ತಂದೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್​, ಕುಮಾರಸ್ವಾಮಿ, ವಿಜಯೇಂದ್ರ ವಿರುದ್ದ FIR ದಾಖಲು

ಹೀರಾ ಮೋಹನ್​, ಹಲ್ಲೆಗೊಳಗಾದ ಯುವತಿ ತಂದೆ, ಪ್ರಣವ್​ ಮತ್ತು ತಂಡ ಯುವತಿಯ ತಂದೆ ಮೇಲೆ ದಾಳಿ ಮಾಡಿದ ಯುವಕರು, ಏಪ್ರಿಲ್ 14ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಏ.17 ರಂದು ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES