ರಾಯಚೂರು : ಪ್ರೀತಿ ಪ್ರೇಮ ವಿಚಾರಕ್ಕೆ ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದಂತ ದಾರುಣ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ರಾಯಚೂರಿ ಜಿಲ್ಲೆ ಸಿಂಧನೂರು ತಾಲೂಕಿನಲ್ಲಿ ನಡೆದಿದೆ.
ಪ್ರೀತಿ ಪ್ರೇಮ ಎಂದು ನೇಹಾ ಎಂಬ ಯುವತಿಗೆ ನಿತ್ಯ ಟಾರ್ಚರ್ ಕೊಡುತ್ತಿದ್ದ ಯುವಕನಿಂದ ಮಗಳನ್ನು ರಕ್ಷಿಸಲು ಯುವತಿಯ ಪೋಷಕರು ಬೇರೆ ಊರಿನಲ್ಲಿರುವ ಸಂಬಧಿಕರ ಮನೆಗೆ ಕಳಿಸಿದ್ದಕ್ಕೆ ಪಾಗಲ್ ಪ್ರೇಮಿ ಮತ್ತು ತಂಡ ಸೇರಿಕೊಂಡು ಯುವತಿಯ ತಂದೆಯನ್ನು ಬೀದಿಯಲ್ಲಿ ಅಟ್ಟಾಡಿಸಿ ಹಲ್ಲೆ ಮಾಡಿ ಕಾಲು ಮುರಿದಿದ್ದಾರೆ, ಅಷ್ಟೆ ಅಲ್ಲದೇ ಯುವತಿಯ ತಾಯಿಯ ಸೀರೆ ಹಿಡಿದು ಎಳೆದಾಡಿದ್ದಾರೆ, ಯುವತಿಯ ಸಹೋದರ ಹಾಗು ಸಂಬಂಧಿಯ ಮೇಲೂ ಹಲ್ಲೆ ನಡೆಸಿದ್ದಾರೆ. ಕೂಡಲೆ ಮಗಳನ್ನು ವಾಪಾಸ್ ಕರೆಸುವಂತೆ ಒತ್ತಡ ಹಾಕಿದ್ದಾರೆ. ಸದ್ಯ ಗಂಭೀರವಾಗಿ ಹಲ್ಲೆಗೊಳಗಾದ ಯುವತಿಯ ತಂದೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಡಿಕೆ ಶಿವಕುಮಾರ್, ಕುಮಾರಸ್ವಾಮಿ, ವಿಜಯೇಂದ್ರ ವಿರುದ್ದ FIR ದಾಖಲು
ಹೀರಾ ಮೋಹನ್, ಹಲ್ಲೆಗೊಳಗಾದ ಯುವತಿ ತಂದೆ, ಪ್ರಣವ್ ಮತ್ತು ತಂಡ ಯುವತಿಯ ತಂದೆ ಮೇಲೆ ದಾಳಿ ಮಾಡಿದ ಯುವಕರು, ಏಪ್ರಿಲ್ 14ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಏ.17 ರಂದು ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.