Sunday, May 19, 2024

ಹಿರಿಯ ನಟ ದ್ವಾರಕೀಶ್​ ಇನ್ನಿಲ್ಲ: ಸಾವಿಗೂ ಮುನ್ನ ಆಗಿದ್ದೇನು?

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ವಯೋಸಹಜ ಅನಾರೋಗ್ಯದಿಂದ ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿಯಲ್ಲಿರುವ ಸ್ಮೈಲ್​ ಗ್ರೀನ್ಸ್​ ವಿಲ್ಲಾದಲ್ಲಿ ತಮ್ಮ ಪುತ್ರ ಯೋಗೀಶ್​ ದ್ವಾರಕೀಶ್​ ಜೊತೆ ವಾಸವಾಗಿದ್ದರು. ದ್ವಾರಕೀಶ್​ ಸಾವಿನ ಸುದ್ದಿಯ ಕುರಿತು ಯೋಗೀಶ್​ ದ್ವಾರಕೀಶ್ ಪವರ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹಿರಿಯ ನಟ ಕರುನಾಡ ಕುಳ್ಳ ದ್ವಾರಕೀಶ್ ನಿಧನ

ಕಳೆದ ರಾತ್ರಿ ಆಗಿದ್ದೇನು ?

ಕಳೆದ ರಾತ್ರಿ ಅವರಿಗೆ ಲೂಸ್​ ಮೋಷನ್​ ಆಗಿತ್ತು, ತುಂಬಾ ಸುಸ್ತಾಗಿದ್ದರು, ರಾತ್ರಿ ನಾನು, ಅಪ್ಪ ಒಟ್ಟಿಗೇ ಮಲಗಿದ್ದೆವು, ಇಂದು ಬೆಳಗ್ಗೆ ಕಾಫಿ ಬೇಕು ಎಂದು ಹೇಳಿ ಮಾಡಿಸಿಕೊಂಡು ಕುಡಿದರು. ಬಳಿಕ ಸ್ವಲ್ಪ ಹೊತ್ತು ನಿದ್ದೆ ಮಾಡುವುದಾಗಿ ಹೇಳಿದ ಅವರು ನಿದ್ದೆಗೆ ಜಾರಿದ್ದರು, ಬೆಳಗ್ಗೆ 11 ಗಂಟೆ ಸುಮಾರಿಗೆ ಅವರನ್ನು ಎಚ್ಚರಿಸಲು ಹೋದಾಗ ನಿದ್ದೆಯಲ್ಲೆ ವಿಧಿವಶವಾಗಿದ್ದಾರೆ ಎಂದು ತಿಳಿಸಿದ್ದಾರೆ.

ವಿಟಿಆರ್​ ಮಿಲ್ ನಲ್ಲಿ ಅಂತ್ಯಕ್ರಿಯೆ :

ಸದ್ಯ ದ್ವಾರಕೀಶ್​ ಅವರ ಅಂತಿಮ ದರ್ಶನವನ್ನು ಸ್ಮೈಲ್​ ಗ್ರೀನ್ಸ್​ ವಿಲ್ಲಾದಲ್ಲೇ ಏರ್ಪಡಿಸಲಾಗಿದೆ, ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥೀವ ಶರೀರವನ್ನು ಇರಿಸಲು ಮಾತುಕತೆ ನಡೆಸಲಾಗುತ್ತಿದೆ. ನಾಳೆ ಚಾಮರಾಜಪೇಟೆಯ ಟಿಆರ್​ಮಿಲ್​ ನಲ್ಲಿ ದ್ವಾರಕೀಶ್​ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಸಿದ್ದಾರೆ.

RELATED ARTICLES

Related Articles

TRENDING ARTICLES