ಬೆಂಗಳೂರು : ಇದೇ ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಆದ್ರೆ, ಮೋದಿ ಅವರ ಕಾರ್ಯಕ್ರಮಗಳಲ್ಲಿ ಕೊಂಚ ಬದಲಾವಣೆಯಾಗಿದೆ.
ಮಂಗಳೂರಿನಲ್ಲಿ ನಡೆಯಬೇಕಿದ್ದ ಬಿಜೆಪಿ ಬೃಹತ್ ಸಮಾವೇಶ ಮತ್ತು ಬೆಂಗಳೂರಿನಲ್ಲಿ ನಿಗದಿಯಾಗಿದ್ದ ರೋಡ್ ಶೋ ರದ್ದಾಗಿದೆ. ಮೋದಿ ಸಮಾವೇಶ ಬೆಂಗಳೂರು ಬದಲು ಮೈಸೂರಿಗೆ ಶಿಫ್ಟ್ ಆಗಿದೆ. ಬಳಿಕ ಮಂಗಳೂರಿನಲ್ಲಿ ಸಮಾವೇಶದ ಬದಲಿಗೆ ಸುಮಾರು ಎರಡೂವರೆ ಕಿಲೊಮೀಟರ್ ರೋಡ್ ಶೋ ಮಾತ್ರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಗುಡುಗು ಸಿಡಿಲು ಸಿದ್ರಾಮಯ್ಯಗೆ, ಮಳೆ ಹನಿ ಮೋದಿಗೆ : ಬಸವರಾಜ ಬೊಮ್ಮಾಯಿ
ಏಪ್ರಿಲ್ 14ರಂದು ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಬಿಜೆಪಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಕೆಲ ಕಾರಣಾಂತರಗಳಿಂದ ಈ ಸಮಾವೇಶ ರದ್ದಾಗಿದ್ದು, ಅದರ ಬದಲು ಸುಮಾರು ಎರಡೂವರೆ ಕಿಲೊಮೀಟರ್ ರೋಡ್ ಶೋ ನಡೆಸಲಿದ್ದು, ರೂಟ್ ಮ್ಯಾಪ್ ಸಹ ಸಿದ್ಧವಾಗಿದೆ. ಆದರೆ, ಕ್ಲಿಯರೆನ್ಸ್ ಸಿಗಬೇಕಾಗಿರುವುದು ಒಂದೇ ಬಾಕಿ ಇದೆ.