Saturday, May 11, 2024

ಪ್ರಧಾನಿ ಮೋದಿ ಕರ್ನಾಟಕ ಪ್ರವಾಸ : ಕಾರ್ಯಕ್ರಮದಲ್ಲಿ ಬದಲಾವಣೆ

ಬೆಂಗಳೂರು : ಇದೇ ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಆದ್ರೆ, ಮೋದಿ ಅವರ ಕಾರ್ಯಕ್ರಮಗಳಲ್ಲಿ ಕೊಂಚ ಬದಲಾವಣೆಯಾಗಿದೆ.

ಮಂಗಳೂರಿನಲ್ಲಿ ನಡೆಯಬೇಕಿದ್ದ ಬಿಜೆಪಿ ಬೃಹತ್ ಸಮಾವೇಶ ಮತ್ತು ಬೆಂಗಳೂರಿನಲ್ಲಿ ನಿಗದಿಯಾಗಿದ್ದ ರೋಡ್​ ಶೋ ರದ್ದಾಗಿದೆ. ಮೋದಿ ಸಮಾವೇಶ ಬೆಂಗಳೂರು ಬದಲು ಮೈಸೂರಿಗೆ ಶಿಫ್ಟ್​ ಆಗಿದೆ. ಬಳಿಕ ಮಂಗಳೂರಿನಲ್ಲಿ ಸಮಾವೇಶದ ಬದಲಿಗೆ ಸುಮಾರು ಎರಡೂವರೆ ಕಿಲೊಮೀಟರ್​ ರೋಡ್​ ಶೋ ಮಾತ್ರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಗುಡುಗು ಸಿಡಿಲು ಸಿದ್ರಾಮಯ್ಯಗೆ, ಮಳೆ ಹನಿ ಮೋದಿಗೆ : ಬಸವರಾಜ ಬೊಮ್ಮಾಯಿ

ಏಪ್ರಿಲ್ 14ರಂದು ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಬಿಜೆಪಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಕೆಲ ಕಾರಣಾಂತರಗಳಿಂದ ಈ ಸಮಾವೇಶ ರದ್ದಾಗಿದ್ದು, ಅದರ ಬದಲು ಸುಮಾರು ಎರಡೂವರೆ ಕಿಲೊಮೀಟರ್​ ರೋಡ್ ಶೋ ನಡೆಸಲಿದ್ದು, ರೂಟ್​ ಮ್ಯಾಪ್ ಸಹ ಸಿದ್ಧವಾಗಿದೆ. ಆದರೆ, ಕ್ಲಿಯರೆನ್ಸ್ ಸಿಗಬೇಕಾಗಿರುವುದು ಒಂದೇ ಬಾಕಿ ಇದೆ.

RELATED ARTICLES

Related Articles

TRENDING ARTICLES