Friday, May 17, 2024

ಮೆಣಸು ಕುಯ್ಯುವಾಗ ವಿದ್ಯುತ್ ಶಾಕ್‌ : ಸ್ಥಳದಲ್ಲೇ ಕಾರ್ಮಿಕ ದಾರುಣ ಸಾವು

ಹಾಸನ : ಮೆಣಸು ಕುಯ್ಯುವಾಗ ದುರಂತವೊಂದು ನಡೆದಿದ್ದು ವಿದ್ಯುತ್ ಶಾಕ್​ ತಗುಲಿ ವ್ಯಕ್ತಿಯೊಬ್ಬ ಸ್ಥಳದಲ್ಲೇ  ಸಾವಿಗೀಡಾಗಿರುವ ಘಟನೆ ನಡೆದಿದೆ.

ಕಾಸರಗೋಡಿನ ಮಂಜೇಶ್ವರ ಮೂಲದ ಸಮೀರ್​ (32) ಮೃತ ವ್ಯಕ್ತಿ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೊಡ್ಡ ಸಾಲವರ ಗ್ರಾಮದಲ್ಲಿ ಹುಕ್ಕುಂ ಚಂದ್​ ಎನ್ನುವವರ ಮೆಣಸಿನ ತೋಟದಲ್ಲಿ ಮೆಣಸು ಕುಯ್ಯುವಾಗ ಅಚಾನಕ್ಕಾಗಿ ವಿದ್ಯುತ್ ಸ್ಪರ್ಶವಾಗಿ ಸಮೀರ್​ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಮುಖ್ಯ ಶಿಕ್ಷಕ ಬಂಧನ

ಈ ಘಟನೆಯೂ ಅರೆಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

RELATED ARTICLES

Related Articles

TRENDING ARTICLES