Monday, May 20, 2024

ಸ್ಯಾಂಡಲ್​ವುಡ್​ ನಟ ಯೇಸುಪ್ರಕಾಶ್​ ನಿಧನ!

ಶಿವಮೊಗ್ಗ : ಅನಾರೋಗ್ಯದಿಂದ ಬಳಲುತ್ತಿದ್ದ ರಂಗಭೂಮಿ, ಕಿರುತೆರೆ, ಚಲನಚಿತ್ರ ನಟ ಯೇಸುಪ್ರಕಾಶ್ (55) ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಯೇಸು ಪ್ರಕಾಶ್​ ಅವರಿಗೆ ಪತ್ನಿ. ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ. ಎರಡು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರು ನೀನಾಸಂ ಬಳಗ, ಕೆ.ವಿ. ಸುಬ್ಬಣ್ಣ ರಂಗಸಮೂಹ ಸೇರಿ ಹಲವು ರಂಗ ತಂಡಗಳಲ್ಲಿ ಕೆಲಸ ಮಾಡಿದ್ದರು. ಯಕ್ಷಗಾನದಲ್ಲೂ ತರಬೇತಿ ಪಡೆದು ಕೆಲವು ಪ್ರಸಂಗಗಳಿಗೆ ಬಣ್ಣ ಹಚ್ಚಿದ್ದರು.

ಇದನ್ನೂ ಓದಿ: ಶನಿವಾರ ಸುರಿದ ಭಾರಿ ಮಳೆಗೆ ನೆಲಕಚ್ಚಿದ ದ್ರಾಕ್ಷಿ ಬೆಳೆ : ಆತಂಕದಲ್ಲಿ ರೈತ

ಸದ್ಯ ಯೇಸು ಪ್ರಕಾಶ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಶಿವಮೊಗ್ಗದ ಸಾಗರದಲ್ಲಿರುವ ಕಲ್ಲುಕೊಪ್ಪದ (ಪುರಪ್ಪೇಮನೆ) ಅವರ ಸ್ವಗೃಹದಲ್ಲಿ ಸಿದ್ಧತೆ ನಡೆಸಲಾಗಿದೆ. ರಂಗ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಯೇಸು ಪ್ರಕಾಶ್ ನಿಧನಕ್ಕೆ ಕನ್ನಡ ಚಿತ್ರರಂಗದ ತಾರೆಯರು ಕಂಬನಿ ಮಿಡಿದಿದ್ದಾರೆ.

ಎಸ್.ನಾರಾಯಣ್‌ ನಿರ್ದೇಶನದ ‘ವೀರು’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿದ್ದರು. ರಾಜಾಹುಲಿ, ಯಾರೇ ಕೂಗಾಡಲಿ, ಸಾರಥಿ, ಯೋಧ, ಕಲ್ಪನಾ-2 ಸೇರಿ 35ಕ್ಕೂ ಹೆಚ್ಚು ಸಿನಿಮಾ ಹಾಗೂ 100ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದರು.

RELATED ARTICLES

Related Articles

TRENDING ARTICLES