ಬೆಂಗಳೂರು: ಮುಖ್ಯಮಂತ್ರಿಗಳ ಸುಪುತ್ರರಾಗಿ ಈ ರೀತಿ ಹೇಳಿಕೆ ನೀಡೋದು ಶೋಭೆ ತರಲ್ಲ.ಗೂಂಡಾ ಅನ್ನೋಕೆ ಯತೀಂದ್ರನಿಗೆ ಏನು ಯೋಗ್ಯತೆ ಇದೆ? ಕೂಡ್ಲೇ ಕ್ಷಮೆ ಕೇಳಬೇಕು ಎಂದು ಬಿ.ವೈ.ವಿಜೆಯೇಂದ್ರ ತಿರುಗೇಟು ನೀಡಿದ್ದಾರೆ.
ಅಮಿಶ್ ಶಾರನ್ನ ಗೂಂಡಾ ಎಂದು ಯತೀಂದ್ರ ಹೇಳಿಕೆ ವಿಚಾರವಾಗಿ ಮತನಾಡಿದ ಅವರು ಯತೀಂದ್ರ ಅವರ ಯೋಗ್ಯತೆ ಏನು ಅರ್ಥ ಮಾಡಿಕೊಳ್ಳಬೇಕು.ಮುಖ್ಯಮಂತ್ರಿಗಳ ಸುಪುತ್ರರಾಗಿ ಈ ರೀತಿ ಹೇಳಿಕೆ ನೀಡೋದು ಶೋಭೆ ತರಲ್ಲ ಮಾಜಿ ಶಾಸಕರಾಗಿ ಅಮಿತ್ ಶಾರ ಬಗ್ಗೆ ಹೇಳಿದ್ದನ್ನ ನಾನು ಅವರು ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ ತಕ್ಷಣವೇ ಕೂಡಲೇ ಕ್ಷಮೆ ಕೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯದಲ್ಲಿ ಗೂಂಡಾಗಿರಿ ಮಾಡ್ತಾ ಇರೋರು ಯಾರು ಅಂದರೆ ಗುಲಬರ್ಗಾದಿಂದ ಮೈಸೂರಿನವರಿಗೆ ಜನ ಹೇಳ್ತಾರೆ. ಲೋಕಸಭೆ ಚುನಾವಣೆ ಸೋಲು ಈ ರೀತಿ ಹೇಳಿಕೆ ನೀಡಿದ್ದಾರೆ.ದೇವೇಗೌಡ,ಕುಮಾರಸ್ವಾಮಿ ಅವರು ನಾವು ನಿನ್ನೆ ಮೊನ್ನೆ ಒಟ್ಟಿಗೆ ಕಾರ್ಯಕ್ರಮ ಮಾಡಿದ್ದೇವೆ.ಏಪ್ರಿಲ್ 4 ರಂದು ಪ್ರಜ್ವಲ್ ನಾಮಪತ್ರ ಸಲ್ಲಿಕೆ ವೇಳೆ ನಾನು ಇರ್ತೀನಿ ದೇಶದ ಭವಿಷ್ಯ ಚುನಾವಣಾ ಇದೆ ಎಲ್ಲ ವ್ಯತ್ಯಾಸ ಬದಿಗಿಟ್ಟು ಕೆಲಸ ಮಾಡೋಣ ಎಂದು ಸಂದೇಶ ನೀಡಿದ್ದರು.