ರಾಮನಗರ: ದೇವೇಗೌಡರು ಸುಳ್ಳುಗಾರ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಅವರ ವ್ಯಕ್ತಿತ್ವಕ್ಕೆ ಶೋಭೆ ತರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಮಗೆ ಸಿದ್ದರಾಮಯ್ಯನವರ ಬಗ್ಗೆ ಗೌರವವಿದೆ.ಆದರೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಬಗ್ಗೆ ಅವಹೇಳನ ಸಹಿಸಲ್ಲ.92ನೇ ವಯಸ್ಸಿನಲ್ಲೂ ರೈತರ ಬಗ್ಗೆ ದೇಶದ ಬಗ್ಗೆ ಕಾಳಜಿ ಇರುವವರು ದೇವೇಗೌಡರು.ಇಂತವರ ಬಗ್ಗೆ ಸಿದ್ದರಾಮಯ್ಯನವರ ಹೇಳಿಕೆ ಅವರ ಸ್ಥಾನಕ್ಕೆ, ವ್ಯಕ್ತಿತ್ವಕ್ಕೆ ಶೋಭೆ ತರಲ್ಲ ನಿಖಿಲ್ ಕುಮಾರಸ್ವಾಮಿ ಸಿಎಮ ಸಿದ್ದುಗೆ ಟಾಂಗ್ ಕೊಟ್ಟರು.
ಈ ಬಾರಿ ಡಾ.ಮಂಜುನಾಥ್ ಗೆಲುವು ನಿಶ್ಚಿತ
ಕಳೆದ 15ದಿನಗಳಿಂದ ನಿರಂತರ ಪ್ರವಾಸ ಮಾಡ್ತಿದ್ದೇವೆ.ಎಲ್ಲಾ ಕಡೆ ಮೈತ್ರಿ ಅಭ್ಯರ್ಥಿಗೆ ಉತ್ತಮ ರೆಸ್ಪಾನ್ಸ್ ಸಿಕ್ತಿದೆ.
ಡಾ.ಮಂಜುನಾಥ್ ರವರ ಪರವಾದ ಅಲೆ ಎದ್ದಿದೆ. ಎಲ್ಲರೂ ಪಕ್ಷಾತೀತವಾಗಿ ಬೆಂಬಲ ಸೂಚಿಸ್ತಿದ್ದಾರೆ.
ಈ ಬಾರಿ ಡಾ.ಮಂಜುನಾಥ್ ಗೆಲುವು ನಿಶ್ಚಿತ ಎಂದರು.
ಇದನ್ನೂ ಓದಿ: ಕಾಂಗ್ರೆಸ್ನವ್ರು ಫ್ಲಾನಿಂಗ್ ಮಾಡೋದ್ರಲ್ಲಿ ನಿಸ್ಸೀಮರು: ನಿಖಿಲ್ ಕುಮಾರಸ್ವಾಮಿ
ಕಾಂಗ್ರೆಸ್ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ವಿರುದ್ಧ ಕಾಂಗ್ರೆಸ್ ನಾಯಕರ ಟೀಕೆ ವಿಚಾರವಾಗಿ ಮಾತನಾಡಿದ ಅವರು, ಅವರು ನಮ್ಮ ಬಗ್ಗೆ ಮಾತನಾಡುವುದು ಸರ್ವೇಸಾಮಾನ್ಯ.ಅವರ ಕೆಗಳನ್ನ ನಾವು ನೋಡ್ತಿದ್ದೇವೆ.
ರಾಮನಗರದ ಜನತೆಯೂ ಕೂಡಾ ಇದನ್ನ ಗಮನಿಸುತ್ತಿದ್ದಾರೆ.ಹಾಗಾಗಿ ಜನ ಪ್ರಬುದ್ಧತೆ ಇವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಗುಡಿಗಿದ್ದರು.