Saturday, May 4, 2024

ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ : ಬಿ.ಎಸ್​ ಯಡಿಯೂರಪ್ಪ

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರು ಈ‌ ವಯಸ್ಸಲ್ಲಿ ಇಲ್ಲಿ ಬಂದು ಕೂತಿದ್ದಾರೆ, ರಾಜ್ಯಾದ್ಯಂತ ಪ್ರವಾಸ ಮಾಡ್ತೀನಿ ಅಂತಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೋದಿಯವರು ಒಂದು ದಿನವೂ ವಿಶ್ರಾಂತಿ ಪಡೆಯದೇ ದೇಶದ ಸೇವೆ ಮಾಡ್ತಿದ್ದಾರೆ. ಇವರಿಬ್ಬರು ನಮ್ಮ ಆದರ್ಶಗಳು. ನಾವೂ ಕೂಡಾ ವಿಶ್ರಾಂತಿ ಇಲ್ಲದೇ ಚುನಾವಣಾ ಕೆಲಸ ಮಾಡಿದರೆ ಎಲ್ಲ ಕ್ಷೇತ್ರ ಗೆಲ್ಲಬಹುದು.

ಇದನ್ನೂ ಓದಿ: ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ: ಇನ್ನೆರಡು ದಿನಗಳಲ್ಲಿ 40 ಡಿಗ್ರಿಗೆ ಏರಿಕೆ

ಸರ್ಕಾರದ ಖಜಾನೆ ಖಾಲಿಯಾಗಿದೆ, ಅಭಿವೃದ್ಧಿ ಸ್ಥಗಿತ ಆಗಿದೆ. ಕಿಸಾನ್ ಸಮ್ಮಾನ್ ಅಡಿ ರೈತರಿಗೆ ಈ ಸರ್ಕಾರ ಹಣ ಕೊಡೋದನ್ನ ನಿಲ್ಲಿಸಿದೆ. ಬಿಜೆಪಿ ಜೆಡಿಎಸ್ ಬೇರೆ ಅಲ್ಲ, ನಾವು ಒಂದೇ ತಾಯಿ ಮಕ್ಕಳು. ನಾವು ಒಟ್ಟಾಗಿ ಕೆಲಸ ಮಾಡಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸೋಣ, ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು.

ಎಲ್ಲಿದೆ ಇವರ ಅಭಿವೃದ್ಧಿ? ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಅಧಿಕಾರ ಮದ ಇವರ ತಲೆಗೇರಿದೆ. ಯಾವುದೇ ಶಕ್ತಿ ಬಿಜೆಪಿ ಜೆಡಿಎಸ್ 28 ಕಡೆ ಗೆಲ್ಲುವುದನ್ನು ತಡೆಯಲು ಸಾಧ್ಯವಿಲ್ಲ. ಇದೇ ವಾತಾವರಣ ಮುಂದುವರೆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ, ಕಾಂಗ್ರೆಸ್ ಅಡ್ರೆಸ್​​​ಗೆ ಇಲ್ಲದಂತಾಗಲಿದೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES