Saturday, May 18, 2024

ಸಿದ್ದರಾಮಯ್ಯನವರೇ ನೀವೇಕೆ ಈ ಬಾರಿ ಚುನಾವಣೆಯಲ್ಲಿ ನಿಮ್ಮ ಪುತ್ರರತ್ನರನ್ನ ನಿಲ್ಲಿಸುತ್ತಿಲ್ಲ? ಸೋಲಿನ ಭಯವೇ?: ಬಿಜೆಪಿ ವ್ಯಂಗ್ಯ

ಬೆಂಗಳೂರು: ಸ್ವಯಂಘೋಷಿತ ಸ್ಟ್ರಾಂಗ್‌ ಸಿಎಂ ಸಿದ್ದರಾಮಯ್ಯನವರೇ ನಿಮ್ಮ ಪುತ್ರರತ್ನರನ್ನ ನೀವೇಕೆ ಈ ಬಾರಿ ಚುನಾವಣೆಗೆ ನಿಲ್ಲಿಸುತ್ತಿಲ್ಲ…? ಸೋಲಿನ ಭಯವೇ? ಎಂದು ಎಂದು ರಾಜ್ಯ ಬಿಜೆಪಿ ವ್ಯಂಗ್ಯ ಮಾಡಿದೆ. 

ಈ ಕುರಿತು ಎಕ್ಸ್​ನಲ್ಲಿ ಲೇವಡಿ ಮಾಡಿರುವ ಬಿಜೆಪಿ ಬೇರೆ ಸಚಿವರ ಮಕ್ಕಳನ್ನು ಚುನಾವಣಾ ಬಾವಿಗೆ ನೂಕಿ ಮಾನ್ಯ ಸಿದ್ದರಾಮಯ್ಯರವರು ತಮ್ಮ ಪುತ್ರರಾದ ಶ್ಯಾಡೋ ಸಿಎಂ ಯತೀಂದ್ರ ಅವರನ್ನು ಚುನಾವಣೆಗೆ ನಿಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಫೋಸ್ಟ್​ ಮಾಡಿದ್ದಾರೆ. 

ಬಿಜೆಪಿ ಫೋಸ್ಟ್​ನಲ್ಲಿ ಏನಿದೆ..?

ಸಚಿವರ ಮಕ್ಕಳು ಬಾವಿಗೆ ಬೀಳುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ ಅದರಲ್ಲಿ ಯತೀಂದ್ರನ್ನು ಹೋಲುವ ರೇಖಾ ಚಿತ್ರದಲ್ಲಿ ಅಪ್ಪಾ ನಾ ಎಂದು ಬರೆದಿದ್ದಾರೆ. ಇನ್ನೊಂದು ಚಿತ್ರದಲ್ಲಿ ನಿನ್​ ಅಲ್ಲಿ ಇರು ಮಗನೇ ಇವರೆಲ್ಲಾ ಆಳ ನೋಡಿ ಬರಲಿ ಎಂದು ಲೇವಡಿ ಮಾಡಿದ್ದಾರೆ. 

RELATED ARTICLES

Related Articles

TRENDING ARTICLES