ಬೆಂಗಳೂರು: ಸ್ವಯಂಘೋಷಿತ ಸ್ಟ್ರಾಂಗ್ ಸಿಎಂ ಸಿದ್ದರಾಮಯ್ಯನವರೇ ನಿಮ್ಮ ಪುತ್ರರತ್ನರನ್ನ ನೀವೇಕೆ ಈ ಬಾರಿ ಚುನಾವಣೆಗೆ ನಿಲ್ಲಿಸುತ್ತಿಲ್ಲ…? ಸೋಲಿನ ಭಯವೇ? ಎಂದು ಎಂದು ರಾಜ್ಯ ಬಿಜೆಪಿ ವ್ಯಂಗ್ಯ ಮಾಡಿದೆ.
ಈ ಕುರಿತು ಎಕ್ಸ್ನಲ್ಲಿ ಲೇವಡಿ ಮಾಡಿರುವ ಬಿಜೆಪಿ ಬೇರೆ ಸಚಿವರ ಮಕ್ಕಳನ್ನು ಚುನಾವಣಾ ಬಾವಿಗೆ ನೂಕಿ ಮಾನ್ಯ ಸಿದ್ದರಾಮಯ್ಯರವರು ತಮ್ಮ ಪುತ್ರರಾದ ಶ್ಯಾಡೋ ಸಿಎಂ ಯತೀಂದ್ರ ಅವರನ್ನು ಚುನಾವಣೆಗೆ ನಿಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಫೋಸ್ಟ್ ಮಾಡಿದ್ದಾರೆ.
ಬಿಜೆಪಿ ಫೋಸ್ಟ್ನಲ್ಲಿ ಏನಿದೆ..?
ಸಚಿವರ ಮಕ್ಕಳು ಬಾವಿಗೆ ಬೀಳುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ ಅದರಲ್ಲಿ ಯತೀಂದ್ರನ್ನು ಹೋಲುವ ರೇಖಾ ಚಿತ್ರದಲ್ಲಿ ಅಪ್ಪಾ ನಾ ಎಂದು ಬರೆದಿದ್ದಾರೆ. ಇನ್ನೊಂದು ಚಿತ್ರದಲ್ಲಿ ನಿನ್ ಅಲ್ಲಿ ಇರು ಮಗನೇ ಇವರೆಲ್ಲಾ ಆಳ ನೋಡಿ ಬರಲಿ ಎಂದು ಲೇವಡಿ ಮಾಡಿದ್ದಾರೆ.
ಸ್ವಯಂಘೋಷಿತ ಸ್ಟ್ರಾಂಗ್ ಸಿಎಂ @siddaramaiah ಅವರೇ, ನಿಮ್ಮ ಪುತ್ರರತ್ನರನ್ನ ನೀವೇಕೆ ಈ ಬಾರಿ ಚುನಾವಣೆಗೆ ನಿಲ್ಲಿಸುತ್ತಿಲ್ಲ…?
ಸೋಲಿನ ಭಯವೇ?
ಬೇರೆ ಸಚಿವರ ಮಕ್ಕಳನ್ನು ಚುನಾವಣಾ ಬಾವಿಗೆ ನೂಕಿ ಮಾನ್ಯ ಸಿದ್ದರಾಮಯ್ಯರವರು ತಮ್ಮ ಪುತ್ರರಾದ #ShadowCM ಯತೀಂದ್ರ ಅವರನ್ನು ಚುನಾವಣೆಗೆ ನಿಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ.… pic.twitter.com/GrrtCokMDY
— BJP Karnataka (@BJP4Karnataka) March 26, 2024