ತುಮಕೂರು : ಅಪ್ಪನ ಮೇಲೆ ಶಾಸಕ ಶ್ರೀನಿವಾಸ್ ವಾಗ್ದಾಳಿ ನಡೆಸಿದ್ರೆ, ಮಗನ ಮೇಲೆ ಗೃಹ ಸಚಿವ ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ. ತುಮಕೂರಿನಲ್ಲಿ ಕಾಂಗ್ರೆಸಿಗರಿಗೆ ಅಪ್ಪ ಮಗನೇ ಟಾರ್ಗೆಟ್ ಆಗಿದ್ದಾರೆ.
ತಂದೆ ಹಾಗೂ ಸಂಸದ ಜಿ.ಎಸ್. ಬಸವರಾಜ್ ವಿರುದ್ಧ ಶಾಸಕ ಎಸ್.ಆರ್. ಶ್ರೀನಿವಾಸ್ ನಾಲಗೆ ಹರಿಬಿಟ್ಟಿದ್ದಾರೆ. ಇತ್ತ, ಮಗ ಹಾಗೂ ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ವಿರುದ್ದ ಡಾ.ಜಿ. ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಪರ ಪ್ರಚಾರದ ವೇಳೆ ಮಾತನಾಡಿದ ಪರಮೇಶ್ವರ್, ಜ್ಯೋತಿ ಗಣೇಶ್ ಕಾಂಗ್ರೆಸ್ ಸರ್ಕಾರ ಬರ ನಿರ್ವಹಣೆಯಲ್ಲಿ ವಿಫಲ ಆಗೋಗಿದೆ ಅಂತಾರೆ. ಪಾಪ ನಿನಗೆ ಗೊತ್ತಿಲ್ಲ.. ಒಂದು ರೂಪಾಯಿ ಕೊಡಿಸೋಕೆ ಆಗಲಿಲ್ಲ. ನಿಮ್ಮ ಮನೆ ಹಾಳಾಗ ಎಂದು ಕಿಡಿಕಾರಿದ್ದಾರೆ.
ಈ ಸುದ್ದಿ ಓದಿದ್ದೀರಾ? : ತುಮಕೂರಿನಲ್ಲೊಬ್ಬ ನಪುಂಸಕ ಸಂಸದ ಇದ್ದಾನೆ: ಎಸ್.ಆರ್.ಶ್ರೀನಿವಾಸ್ ವಿವಾದಾತ್ಮಕ ಹೇಳಿಕೆ
ಹೀಗೆ ಹೇಳೋಕಾದರೂ ಹೇಗೆ ಮನಸ್ಸು ಬರುತ್ತೆ
26 ಜನ ಸಂಸದರನ್ನು ಕೊಟ್ಟಿದೆ ಕರ್ನಾಟಕ. ತುಮಕೂರು ಸೇರಿ 26 ಸಂಸದರನ್ನು ಕೊಟ್ಟಿದೆ. ನಮಗೆ ಒಂದು ರೂಪಾಯಿ ಕೊಡೋಕೆ ಆಗಲಿಲ್ಲ ನಿಮಗೆ. ಒಂದೇ ಒಂದು ರೂಪಾಯಿ ಕೊಡಿಸೋಕೆ ಆಗಿಲ್ಲ, ಹೀಗೆ ಹೇಳೋಕಾದರೂ ಹೇಗೆ ಮನಸ್ಸು ಬರುತ್ತೆ. ನಾವು ಪ್ರತಿಯೊಬ್ಬ ರೈತನಿಗೂ 2,000 ಹಣ ತಲುಪಿಸಿದ್ದೇವೆ. ಅದು ನೇರವಾಗಿ, ಯಾವ ಮಧ್ಯವರ್ತಿನೂ ಇಲ್ಲ. ಅವನ ಬ್ಯಾಂಕ್ ಖಾತೆಗೆ ದುಡ್ಡು ಕಳುಹಿಸಿದ್ದೇವೆ. ನೀವು ನಮಗೆ ಹೇಳ್ತೀರಾ? ಎಂದು ಶಾಸಕ ಜ್ಯೋತಿ ಗಣೇಶ್ ವಿರುದ್ದ ಪರಮೇಶ್ವರ್ ಹರಿಹಾಯ್ದಿದ್ದಾರೆ.