ಮೈಸೂರು: ಯದುವೀರ್ ಟಾರ್ಗೆಟ್ ಬೇಡ. ಬಿಜೆಪಿ ಅಷ್ಟೆ ನಮ್ಮ ಟಾರ್ಗೆಟ್ ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಮುಖಂಡರು ಹಾಗೂ ಶಾಸಕರುಗಳಿಗೆ ಸಿಎಂ ಸಿದ್ದರಾಮಯ್ಯ ಕಿವಿ ಮಾತಗಳನ್ನಾಡಿದ್ದಾರೆ.
ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು,ಯದುವೀರ್ ಮಹರಾಜ ಅನ್ನುವುದಕ್ಕಿಂತ ಬಿಜೆಪಿ ಅಭ್ಯರ್ಥಿ ಅನ್ನುವುದಷ್ಟೆ ಇರಲಿ.ಭಾಷಣ ಮಾಡವಾಗ ಎಚ್ಚರ ಇರಲಿ.ಯದುವೀರ್ ವಿರುದ್ಧ ಸಿಕ್ಕ ಸಿಕ್ಕಾಗೆ ಹೇಳಿಕೆ ಕೊಡಬೇಡಿ.ಎಮೋಷನಲ್ ವಿಚಾರವನ್ನ ತಿರುಗಿಸುವಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಹೇಳಿದ್ದರು.
ಬಿಜೆಪಿಯವರಿಗೆ ನಿಮ್ಮ ಹೇಳಿಕೆ ಆಹಾರವಾಗಬಾರದ
ಮಾತನಾಡುವಾಗ ಸ್ಪಲ್ಪ ಎಚ್ಚರಿಕೆಯಿಂದ ಮಾತನಾಡಿ ಇಲ್ಲವಾದಲ್ಲಿ ನಿಮ್ಮ ಹೇಳಿಕೆ ಬಿಜೆಪಿಯವರಿಗೆ ಆಹಾರವಾಗುತ್ತದೆ.ಈ ಕಾರಣದಿಂದ ಯದುವೀರ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು
ಮುಖಂಡರು ಹಾಗೂ ಶಾಸಕರುಗಳಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತುಗಳನ್ನು ಹೇಳಿದ್ದಾರೆ.